ಬೆಳ್ತಂಗಡಿ : ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುದೇವ ಮಠದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತದ ಪರ್ವಕಾಲದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭೇಟಿ ನೀಡಿ ಆಶೀರ್ವಾದ ಪಡೆದವರು.
ಸಿಗಂದೂರ್ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರವಿ, ಕನ್ಯಾಡಿ ಎಸ್. ಕೆ. ಲಾಡ್ಜ್ ಮಾಲಕ ಇಂಜನಿಯರ್ ಸೂರ್ಯನಾರಾಯಣ ಮತ್ತು ಮನೆಯವರು ಪಾದುಕಾ ಪೂಜೆ ನೆರವೇರಿಸಿದರು.
ಮಂಗಳೂರಿನ ಲೆಕ್ಕ ಪರಿಶೋಧಕ ದಯಾ ಶರಣ್ ಶೆಟ್ಟಿ, ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್. ಪ್ರಕಾಶ್, ಇನ್ನಿತರರು ಗುರುಗಳ ಆಶೀರ್ವಾದ ಪಡೆದುಕೊಂಡರು.
ನಿಡಿಗಲ್ ಒಂಕರೇಶ್ವರ ಭಜನಾ ಮಂಡಳಿ ಪಜೀರಡ್ಕ,ಕಲ್ಮಂಜ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು.