ಲಕ್ನೋ: ಲಕ್ನೋ ಮತ್ತು ಕಾನ್ಪುರ ನಗರಗಳಲ್ಲಿ ನಿಯೋಜಿಸಲಾಗುವ 42 ಎಲೆಕ್ಟ್ರಿಕ್ ಬಸ್ ಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹಸಿರು ನಿಶಾನೆ ತೋರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಶಬ್ದ ಮತ್ತು ವಾಯುಮಾಲಿನ್ಯದಿಂದ ಮುಕ್ತವಾದ ಸಾರ್ವಜನಿಕ ಸಾರಿಗೆಯು ಸಮಯದ ಅಗತ್ಯವಾಗಿದೆ. ದೇಶದಲ್ಲಿ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಗೊಳ್ಳುತ್ತಿರುವ 100 ನಗರಗಳ ಪೈಕಿ 10 ನಗರಗಳು ಉತ್ತರ ಪ್ರದೇಶದವು.
ಎಲೆಕ್ಟ್ರಿಕ್ ಬಸ್ ಗಳ ನಿಯೋಜನೆಯು ಸಂಪರ್ಕವನ್ನು ಸಹ ಸುಧಾರಿಸುತ್ತದೆ ಎಂದು ಅವರು ಹೇಳಿದರು. 42 ಬಸ್ ಗಳಲ್ಲಿ 34 ಬಸ್ ಗಳನ್ನು ಲಕ್ನೋದಲ್ಲಿ ಮತ್ತು 8 ಬಸ್ ಗಳನ್ನು ಕಾನ್ಪುರದಲ್ಲಿ ನಿಯೋಜಿಸಲಾಗುವುದು.