ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ 74ನೆ ಜನ್ಮದಿನವನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಸರಳವಾಗಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ದೇವಳದ ನೌಕರರು, ಊರಿನ ನಾಗರಿಕರು, ಭಕ್ತರು, ಅಭಿಮಾನಿಗಳು ಶ್ರದ್ಧಾ-ಭಕ್ತಿಯಿಂದ ಜನ್ಮದಿನದ ಶುಭಾಶಯ ಅರ್ಪಿಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಶಾಸಕ ಹರೀಶ್ ಪೂಂಜ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಗ್ಗಡೆಯವರಿಗೆ ಶುಭಾಶಯ ಸಲ್ಲಿಸಿದರು.ದೂರವಾಣಿ, ವಿದ್ಯುದಂಚೆ, ಪತ್ರಗಳ ಮೂಲಕವೂ ಶುಭಾಶಯಗಳು ಹರಿದು ಬಂದಿವೆ.