ಬೆಳ್ತಂಗಡಿ: ತಾಲೂಕಿನಲ್ಲಿ ಭಾನುವಾರವು ಭಾರಿ ಮಳೆ ಮುಂದುವರಿಯಿತು. ಮಿತ್ತ ಬಾಗಿಲು ಗ್ರಾಮದ ಗುಡ್ಡೆತ್ತಿ ಮಾರ್ ಎಂಬಲ್ಲಿ ರತ್ನಾಕರ ಎಂಬವರ ಮನೆಯ ಪಾರ್ಶ್ವ ಕುಸಿದು ಬಿದ್ದಿದ್ದು ಮನೆಮಂದಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ದಿಡುಪೆ ಸಮೀಪದ ಪರಾರಿ ಎಂಬಲ್ಲಿ ಕೇಶವ ಫಡಕೆ ಯವರ ತೋಟದಲ್ಲಿ ಬೃಹತ್ ಗಾತ್ರದ ಮರ ಒಂದು ಉರುಳಿ ಬಿದ್ದು ಸುಮಾರು ಮೂವತ್ತಕ್ಕಿಂತ ಅಧಿಕ ಅಡಕೆ ಗಿಡಗಳಿಗೆ ಸಂಪೂರ್ಣ ಹಾನಿ ಉಂಟಾಗಿದೆ.
ನೇತ್ರಾವತಿ, ಮೃತ್ಯುಂಜಯ ಸೇರಿದಂತೆ ತಾಲೂಕಿನಲ್ಲಿ ಹರಿಯುತ್ತಿರುವ ನದಿ, ಹೊಳೆ,ಹಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದರು ಪ್ರಸ್ತುತ ಪ್ರವಾಹದ ಸ್ಥಿತಿ ಕಂಡು ಬಂದಿಲ್ಲ.