ಬೆಳ್ತಂಗಡಿ: ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಒಂದು ತೆಂಗಿನ ಮರ,ಎರಡು ತೆಂಗಿನ ಸಸಿ ಹಾಗೂ 50ಕ್ಕಿಂತ ಅಧಿಕ ಫಲ ಬಿಟ್ಟ ಬಾಳೆಗಿಡಗಳನ್ನು ಧ್ವಂಸ ಮಾಡಿವೆ.
ಒಂದಕ್ಕಿಂತ ಅಧಿಕ ಆನೆ ಬಂದಿರುವುದು ಹೆಜ್ಜೆ ಗುರುತಿನ ಮೂಲಕ ದೃಢವಾಗಿದೆ ಕಳೆದ 15ದಿನಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಯಾಗಿದೆ.