ಬೆಳ್ತಂಗಡಿ: ಆರ್ಥಿಕ ವ್ಯವಹಾರದ ಪ್ರಾಮಾಣಿಕತೆ ಇದ್ದರೆ ಸಂಸ್ಥೆ ಬೆಳೆಯುತ್ತದೆ ಎಂಬುದಕ್ಕೆ ಶ್ರಿ ಗುರುದೇವ ವಿವಿದೊದ್ದೇಶ ಸಹಕಾರಿ ಸಂಘ ಸಾಕ್ಷಿ.ಇದಕ್ಕೆ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯೂ ಕಾರಣ. ಸಹಕಾರಿ ಸಂಘಗಳು ಅರ್ಥಿಕ ವ್ಯವಹಾರ ಜೊತೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೆಕು.ಸಹಕಾರಿ ಸಂಘಗಳು ಸಾಲ ನೀಡುವ ಜೊತೆ ಗ್ರಾಹಕರಿಗೆ ಮರುಪಾವತಿ ತಂತ್ರಗಾರಿಕೆಯನ್ನು ಕಲಿಸಬೇಕು ಎಂದು ಸೋಲು ಮಠದ ಪೀಠಾದಿಶರಾದ ಶ್ರಿ ಶ್ರಿ ವಿಖ್ಯಾತಾನಂದ ಸ್ವಾಮೀಜಿ ನುಡಿದರು.
ಅವರು ಭಾನುವಾರ ಬೆಳ್ತಂಗಡಿ ಭಾರತ್ ಪೆಟ್ರೋಲ್ ಬಂಕ್ ಬಳಿ ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ಶ್ರಿ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಸಂಸ್ಥೆ ಬೆಳೆದಂತೆ ನೂರಾರು ಮಂದಿಗೆ ಉದ್ಯೋಗ ಸ್ರುಷ್ಠಿಯಾಗುತ್ತದೆ.ಇದರಿಂದ ನೂರಾರು ಕುಟುಂಬಗಳು ಬೆಳಗಲು ಸಾದ್ಯ.ಮುಂದಿನ ದಿನಗಳಲ್ಲಿ ನೂರು ಶಾಖೆಗಳು ತೆರೆದು ಎತ್ತರಕ್ಕೆ ಬೆಳೆಯಲಿ ಎಂದರು.
ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾದ್ಯಕ್ಷ ,ಬ್ಯಾಂಕಿನ ನಿರ್ದೇಶಕ ಕೆ ವಸಂತ ಬಂಗೇರ ಮಾತನಾಡಿ ನಾಲ್ಕು ವರ್ಷದ ಹಿಂದೆ ಕಟ್ಟಡ ನಿರ್ಮಿಸುವ ಉದ್ದೇಶ ಇತ್ತು .ಅದರೆ ತಾಂತ್ರಿಕ ಕಾರಣದಿಂದ ವಿಳಂಬವಾಯಿತು.ಇದೀಗ ನಾಲ್ಕು ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿದ್ದು ಇದು ಸ್ವಂತ ನಿದಿಯಿಂದ ನಿರ್ಮಾಣವಾಗುತ್ತಿದೆ.ಸಹಕಾರಿ ಕ್ಷೇತ್ರದಲ್ಲಿ ಇದೊಂದು ದಾಖಲೆಯಾಗಿದೆ ಎಂದರು.ಸಂಘದ ಅದ್ಯಕ್ಷ ಪದ್ಮನಾಭ ಮಾಣಿಂಜ ಅದ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ ಆರ್ಥಿಕ ವ್ಯವಹಾರದ ಜೊತೆ ಬಡ ಮಕ್ಕಳಿಗೆ ಶಿಕಚಣ ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಗ್ರಾಹಕರ ಸಿಬ್ಬಂದಿಗಳ,ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್ ಎತ್ತರಕ್ಕೇರಿದೆ ಎಂದರು.ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾದಿಕಾರಿ ಅಶ್ವಥ್ ಕುಮಾರ್ ಸ್ವಾಗತಿಸಿದರು.ನಿರ್ದೇಶಕ ಧರಣೇಂದ್ರ ಕುಮಾರ್ ವಂದಿಸಿದರು.