ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಅತ್ತಿದಡಿ ಎಂಬಲ್ಲಿ ಇತ್ತೀಚೆಗೆ ಸಿಡಿಲು ಬಡಿದ ಪರಿಣಾಮ ಈಚಲ ಮರ ತುಂಡಾಗಿ ಬಿದ್ದಿದೆ.
ಸಮೀಪದ ಬಾಲಣ್ಣ ಗೌಡರ ಮನೆಗೆ ಸಿಡಿಲಿನ ಆಘಾತ ಉಂಟಾಗಿದ್ದು ವಿದ್ಯುತ್ ವೈರಿಂಗ್, ಸಂಪೂರ್ಣ ಸುಟ್ಟು ಹೋಗಿ ಸ್ವಿಚ್ ಬೋರ್ಡ್,ಮೀಟರ್ ಬೋರ್ಡ್ ಗಳು ಕರಕಲಾಗಿವೆ.
ಮನೆಯ ಗೋಡೆಗೂ ಹಾನಿಯಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಪರಿಸರದ ಕೆಲವು ಮನೆಗಳಿಗೆ ಹಾಗೂ ಪರಿಕರಗಳಿಗೆ ಹಾನಿ ಉಂಟಾಗಿರುವುದಾಗಿ ತಿಳಿದು ಬಂದಿದೆ.