News Karnataka Kannada
Friday, May 03 2024
ಮಂಗಳೂರು

ಬೆಳ್ತಂಗಡಿ: ಸೈಕಲ್ ಏರಿ ದೇಶ ಸುತ್ತಿದ ಸಿಂಧನೂರಿನ ರೈತ

cycle yathre
Photo Credit : News Kannada

ಬೆಳ್ತಂಗಡಿ:  ಜಿಲ್ಲೆಯ ಸಿಂಧನೂರಿನ ಐವತ್ತೈದು ವರ್ಷದ ವಿಜಯ್ ಗೋಪಾಲ್ ಕೃಷ್ಣ ಎಂಬುವವರು ಕಳೆದ 2022 ಮಾರ್ಚ್ 11 ರಂದು ತಮ್ಮ ಸೈಕಲ್ ಏರಿ ದೇಶ ಸುತ್ತಲು ಹೊರಟವರು ಕಾಶಿಯಿಂದ ರಾಮೇಶ್ವರ ವರೆಗೆ ಕರ್ನಾಟಕ, ತೆಲಂಗಾಣ, ಗುಜರಾತ್, ಅಯೋಧ್ಯೆ, ಉತ್ತರಪ್ರದೇಶ, ಕಾಶಿ, ಮಧುರ, ಆಗ್ರ, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಕೇರಳ ಸುತ್ತಿ ಧರ್ಮಸ್ಥಳಕ್ಕೆ ಬಂದು ಉಡುಪಿ, ಕಾರಾವಾರ ತೆರಳಲು ಅಣಿಯಾಗಿದ್ದಾರೆ.

ಅವಿವಾಹಿತರಾಗಿರುವ ಇವರು ವ್ಯವಸಾಯಯೇ ಜೀವನಾಧಾರ. ಭಾರತವು ಸುಭದ್ರ ರಾಷ್ಟ್ರವಾಗಬೇಕು. ದೇಶದಲ್ಲಿ ಅನಾಚಾರ, ದೃಷ್ಕೃತ್ಯಗಳು ನಿಲ್ಲಬೇಕು, ಹಾಗೂ ಎಲ್ಲರೂ ದೈವ ಭಕ್ತರಾಗಿದ್ದು ಶಾಂತಿಗಾಗಿ ದೇಶಕ್ಕೆ ಏನನ್ನಾದರು ಕೊಡುಗೆ ನೀಡಿ ಎಂಬುದು ಇವರ ಸೈಕಲ್ ಯಾತ್ರೆಯ ಉದ್ದೇಶವಾಗಿದೆ.

ಸುಮಾರು 22,000 ಕಿ.ಮೀ. ಕೇವಲ ಸೈಕಲ್ ನಲ್ಲಿಯೇ ಸುತ್ತಾಡಿದ ಇವರು, ದೇಶದಲ್ಲಿ ಗಂಗಾ, ಯಮುನಾ, ಸರಸ್ವತಿ ಸಹಿತ 12 ಪ್ರಮುಖದ ನದಿಗಳನ್ನು ಸಂದರ್ಶಿಸಿದ್ದಾರೆ.

ದೇವಸ್ಥಾನದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲೇ ನಿದ್ರೆ ಆಹಾರ ಸೇವಿಸುತ್ತಾ ದಿನ ಒಂದಕ್ಕೆ 70 ರಿಂದ 80 ಕಿ.ಮೀ. ಪ್ರಯಾಣಿಸುತ್ತಾರೆ. ಭಾರತದಲ್ಲಿ ನನಗಿಂತ ಹೆಚ್ಚಾಗಿ ಧ್ವಜಕ್ಕೆ ಬೆಲೆಯಿದ್ದು ಭಾರತೀಯ ಸಂಸ್ಕೃತಿಯ ಒಪ್ಪುವವರೆಲ್ಲಾ ನನಗೆ ಎಲ್ಲ ರಾಜ್ಯಗಳಲ್ಲೂ ಸಹಾಯ, ಸಹಕಾರ ಒದಗಿಸಿದ್ದಾರೆ ಎಂದು ಉದಯವಾಣಿಗೆ ತಿಳಿಸಿದರು.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಬೆಳ್ತಂಗಡಿ ಮಾರ್ಗವಾಗಿ ಉಡುಪಿಗೆ ಸಾಗಿದರು. ಕೇವಲ ಐದನೇ ತರಗತಿ ಶಿಕ್ಷಣ ಪಡೆದ ವಿಜಯ್ ಅವರು ಕನ್ನಡ, ಹಿಂದಿ, ಆಂಗ್ಲ ಭಾಷೆಯಲ್ಲೂ ವ್ಯವಹರಿಸುವ ಮೂಲಕ ದೇಶದ ಬಗೆಗಿನ ಅವರ ಅಮರ ಪ್ರೇಮ ಮಾದರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು