ಬೆಳ್ತಂಗಡಿ: ಗುರುತು ಪತ್ತೆ ಇಲ್ಲದ ಸುಮಾರು ೬೦ ವರ್ಷದ ಪ್ರಾಯದ ಮೃತದೇಹ ಧರ್ಮಸ್ಥಳ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಜ.೨೪ರಂದು ಪತ್ತೆಯಾಗಿದೆ.
ಜಾಹಿರಾತು ಫಲಕ ಹಾಕುವ ಫಲಕಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಂಡುಬಂದಿದೆ.ಜೀವನದಲ್ಲಿ ಜಿಗುಪ್ಸೆ ಹೊಂದಿ ಕೃತ್ಯವೆಸಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಮೃತಪಟ್ಟವರ ವಾರಸುದಾರರು ಇದ್ದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.