ಬೆಳ್ತಂಗಡಿ: ಧರ್ಮಸ್ಥಳದ ಮಂಜುಳನಾದ ಆಲ್ಬಮ್ ಸಾಂಗ್ ಬಿಡುಗಡೆ ಡಾ. ಡಿ ವಿರೇಂದ್ರ ಹೆಗ್ಗಡೆ ದಿವ್ಯ ಹಸ್ತದಿಂದ ಇತ್ತೀಚೆಗೆ ಬಿಡುಗಡೆಗೊಂಡಿತು.
ಡಾ.ಡಿ ವಿರೇಂದ್ರ ಹೆಗ್ಗಡೆಯವರ ಶುಭ ಹಸ್ತದಿಂದ ಬಿಡುಗಡೆಗೊಂಡಿರುವ ಯಕ್ಷಧ್ರುವ ಸತೀಶ್ ಪಟ್ಲ ಕಂಠದಿಂದ ಈ ಹಾಡುಗಳು ಮೂಡಿ ಬಂದಿವೆ. ಚರಣ್ ಉಪ್ಪಳಿಗೆ ಸಾರಥ್ಯದಲ್ಲಿ ಮೂಡಿ ಬಂದಿರುವ ‘ಧರ್ಮಸ್ಥಳದ ಮಂಜುಳ ನಾದ’ ಎಂಬ ಹಾಡು ಸಿಆರ್ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.