ಬೆಳ್ತಂಗಡಿ: ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯಕ್ತ ಎಸ್ಪಿ ಕುಮಾರಸ್ವಾಮಿ ಅವರ ತಂಡ ಹೊರ ರೋಗಿಗಳ ಸಾಲು ಕಂಡು ಆಸ್ಪತ್ರೆ ಪರಿಶೀಲಬೆ ನಡೆಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಮಧು ಆಡಳಿತಾಧಿಕಾರಿ ಚಂದ್ರಕಾಂತ್ ಸಹಿತ ವೈದ್ಯಾಧಿಕಾರಿಗಳು ಸಿಬಂದಿಗಳನ್ನು ಕರೆಸಿ ಹೊರ ರೋಗಿಗಳು ಹೆಚ್ಚಿನ ಸಂಖ್ಯೆಯ ಸರತಿ ಸಾಲುಗಳಿದ್ದಲ್ಲಿ ರಶೀದಿ ನೀಡಲು ಹೆಚ್ಚುವರಿ ಸಿಬಂದಿ ನೇಮಿಸುವಂತೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ನಿರ್ವಹಣೆ, ಸ್ವಚ್ಛತೆ ಕುರಿತು ಪರಿಶೀನೆ ನಡೆಸಿದರು. ರೋಗಿಗಳ ಅವಶ್ಯಕತೆಗೆ ಸರಿಪಡಿಸಿ ಇಟ್ಟುಕೊಳ್ಳುವಂತೆ ಆದೇಶಿಸಿದರು. ಮಾತ್ರವಲ್ಲದೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ನಿರ್ಲಕ್ಷ್ಯವಹಿಸಿರುವುದನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು ಮಾಸಿಕ ಕಡತ ವಿಲೇವಾರಿ ಆಗಿದೆಯೇ ಎಂಬುದನ್ನು ಪರಿಶೀಲಿಸಿದರು. ತಿರಸ್ಕೃತಗೊಂಡಿರುವ ಅರ್ಜಿಗಳ ಪರಿಶೀಲನೆಗಾಗಿ ಕಡತಗಳನ್ನು ಪರಿಶೀಲನೆ ಪಡೆದುಕೊಂಡರು.
ಅಂಗನವಾಡಿ ಕೇಂದ್ರಗಳ ನಿರ್ವಹಣೆ ವಿಚಾರವಾಗಿ ಬೆಳ್ತಂಗಡಿ ನ್ಯಾಯಾಲಯ ಸಮೀಪವಿರುವ ಅಂಗನವಾಡಿಗೆ ಭೇಟಿ ನೀಡದ ಅಧಿಕಾರಿಗಳು ವಸ್ತುಸ್ಥಿತಿ ಪರಿಶೀಲಿಸಿದರು. ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯಡಿಗೆ ಸಿಗುವ ೫ ಸಾವಿರ ಮೊತ್ತ ಸಿಕ್ಕಿಲ್ಲ. ಮಗುವಿಗೆ ನಾಲ್ಕು ವರ್ಷ ವಯಸ್ಸಾದರೂ ವಿಳಂಬವಾಗಿದೆ ಎಂದು ಪಿಲಿಗೂಡು ನಿವಾಸಿ ಪಾರ್ವತಿ ಸ್ಥಳದಲ್ಲೇ ದೂರು ಸಲ್ಲಿಸಿದರು. ಈ ಕುರಿತು ಸಿ.ಡಿ.ಪಿ.ಒ. ಕಚೇರಿಗೆ ತೆರಳಿ ಪರಿಶೀಲಿಸಿದಾಗ ತಾಂತ್ರಿಕ ತೊಂದರೆ ಕಂಡುಬಂದಿತ್ತು. ತಕ್ಷಣವೇ ಸರಿಪಡಿಸುವಲ್ಲಿ ಅಧಿಕಾರಿಗಳು ಕ್ರಮ ವಹಿಸಿದರು.
ಭೇಟಿ ವೇಳೆ ಲೋಕಾಯಕ್ತ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಕಲಾವತಿ, ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಅಮಾನುಲ್ಲಾ ಪಿ.ಐ. ಹಾಗೂ ಸಿಬಂದಿ ಮಹೇಶ್, ಗಾಯತ್ರಿ, ದುಂಡಪ್ಪ ಹಾಜರಿದ್ದರು.