ಮಂಗಳೂರು : ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಆಕಸ್ಮಿಕ ದೋಣಿ ಕೆಟ್ಟ ನಿಂತ ವೇಳೆ ಭಾರಿ ಅಲೆಗೆ
ಸಮುದ್ರ ಪಾಲಾಗಿದ್ದ ಮೀನುಗಾರ ಅರ್ಧಗಂಟೆಗೂ ಹೆಚ್ಚು ಈಜಿ ಮೀನುಗಾರ ಬದುಕುಳಿದ ಘಟನೆ ಭಾನುವಾರ ನಡೆದಿದೆ.
ಕಸಬ ಬೆಂಗ್ರೆಯ ನಿವಾಸಿ ನವಾಝ(35) ಬದುಕುಳಿದ ಮೀನುಗಾರ. ಮಂಗಳೂರು ಹೊರ ವಲಯದ ಉಳ್ಳಾಲದ ಅಳಿವೆಬಾಗಿಲು ಆಳ ಸಮುದ್ರದಲ್ಲಿ ಮೀನು ಗಾರಿಕೆ ನೆಡೆಸಲು ನವಾಝ್ ತೆರಳಿದ್ದರು. ಈ ವೇಳೆ ಬೋಟ ಕೆಟ್ಟು ನಿಂತಿತು. ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ಮುಂದಾಗಿದ್ದಾರೆ. ಏಕಾಏಕಿ ಭಾರಿ ಗಾತ್ರದ ಅಲೆ ಅಪ್ಪಳಿಸಿದ್ದು, ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಸಹಾಯ ದೊರೆಯದೆ ಕಂಗಲಾಗಿದ್ದರು. ಅಲ್ಲೆ ಇದ್ದ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಗೆ ಮುಗಿಸಿ ವಾಪಸ್ಸ ಆಗುತ್ತಿದ್ದ ಮೀನುಗಾರರಾದ ಪ್ರೇಮ ಪ್ರಕಾಶ, ಸೂರ್ಯ ಪ್ರಕಾಶ, ಅನೀಲ ಮೊಂತೇರೋ, ಅಜಿತ ಬೆಂಗರೆ, ರಿತೀಶ ಹೊಯ್ಗೆ ನವಾಝ ಅವರನ್ನು ರಕ್ಷಣೆ ಮಾಡಿದ್ದಾರೆ.