ಮಂಗಳೂರು : ತುಳುನಾಡಿನ ಪ್ರಮುಖ ಹಬ್ಬದಲ್ಲೊಂದಾದ ನಾಗರ ಪಂಚಮಿಯ ಮೇಲೆ ಕರೋನಾ ಛಾಯೆ ಮುಸುಕಿದೆ. ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕರೋನಾ ಕೇಸ್ಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಹಬ್ಬದ ದಿನದಂದು ನೀರಸ ವಾತಾವರಣ ವ್ಯಕ್ತವಾಗಿತ್ತು.
ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಾದ ಕುಡಪು ಮತ್ತು ಶರಾವುಗಳಲ್ಲಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸಾಧಾರಣ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೋವಿಡ್ ನಿಯಮಾವಳಿಯ ಪ್ರಕಾರ ಜನರಿಗೆ ದರ್ಶನವನ್ನು ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದರು.
ಭಕ್ತಾದಿಗಳು ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು
ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾದ ಕಾರಣದಿಂದಾಗಿ ನಾಗರ ಪಂಚಮಿ ಹಬ್ಬ ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ.