ಮಂಗಳೂರು : ಅಡಿಕೆ ತೋಟದಲ್ಲಿ ಮೇಯಲು ಬರುತ್ತಿದ್ದ ಬೀಡಾಡಿ ಕೋಣವೊಂದನ್ನು ತೋಟದ ಮಾಲೀಕ ಮನೆ ಬಾಡಿಗೆ ಯುವಕರಿಂದ ಕೊಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಮಾಡೂರಿನ ಬಲ್ಯ ಎಂಬಲ್ಲಿ ಘಟನೆ ನಡೆದಿದೆ . ಇOದು ಸಂಜೆ ವೇಳೆಗೆ ಮಾಡೂರಿನ ಬಲ್ಯದ ನಿರ್ಜನ ಪ್ರದೇಶದ ಗುಡ್ಡದಲ್ಲಿ ಗುಂಡಿನ ಸದ್ದು ಕೇಳಿಸಿದ್ದು ಕೂಡಲೇ ಅಲ್ಲಿಯೇ ಸ್ಥಳೀಯರು ಧಾವಿಸಿದ್ದಾರೆ .
ಸ್ಥಳಿಯರು ನಿರ್ಜನ ಪ್ರದೇಶದ ಗುಡ್ಡದಲ್ಲಿ ಬೀಡಾಡಿ ಕೋಣವು ಕತ್ತು ಕೊಯ್ದ ಸ್ಥಿತಿಯಲ್ಲಿ ಸತ್ತು ಬಿದ್ದಿತ್ತು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ ಕೋಣ ಸತ್ತು ಬಿದ್ದಿದ್ದ ಸ್ಥಳಕ್ಕೆ ಸ್ಥಳೀಯ ಜಮೀನು ಮಾಲಕ ಜಯರಾಮ ಶೆಟ್ಟಿ ಎಂಬವರು ಬಂದಿದ್ದು ತನ್ನ ತೋಟಕ್ಕೆ ದಾಳಿ ಮಾಡುತ್ತಿದ್ದ ಕೋಣವನ್ನು ಅನ್ಯಕೋಮಿನ ವ್ಯಕ್ತಿಗಳಿಂದ ಗುಂಡಿಕ್ಕಿ ಕೊಲ್ಲಿಲಾಗಿದೆ ಎಂದು ಹೇಳಿದ್ದಾರೆ .
ಕೂಡಲೇ ಬಜರಂಗದಳದ ಸಂಘಟನೆಯ ಪ್ರಮುಖರಾದ ಪವಿತ್ರ ಕೆರೆಬೈಲ್ ಅರ್ಜುನ್ ಮಾಡೋರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸಂದೀಪ್ ಅವರು ಜಯರಾಮ್ ರೈ ಅವರನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು ಬಂದು ಜಯರಾಂ ಶೆಟ್ಟಿ ಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಆ ವ್ಯಕ್ತಿ ಉಲ್ಟಾ ಹೊಡೆದಿದ್ದಾರೆ ತಾನೇನು ಕೋಣವನ್ನು ಕೊಲ್ಲಿಸಿಲ್ಲ ಯಾರೋ ಮೂವರು ತಮ್ಮ ಕೋಣ ನಾಪತ್ತೆಯಾಗಿದೆಯೆಂದು ಬಂದಿದ್ದರು ಎಂದಿದ್ದಾರೆ ಆದರೆ ಹಂತಕರು ಜಯರಾಮ್ ಶೆಟ್ಟಿ ಅವರ ಮನೆಯ ಮುಂದೆಯೇ ಸ್ಕೂಟರನ್ನು ಬಿಟ್ಟು ಓಡಿದ್ದು ಸಂಶಯಕ್ಕೆ ಕಾರಣವಾಗಿದೆ .ಸ್ಥಳೀಯರು ಗುಂಡಿನ ಶಬ್ದ ಕೇಳಿ ಸ್ಥಳದಲ್ಲಿ ಸೇರಿದ್ದರು ಪೋಲಿಸರು ಹಂತಕರು ಯಾರೆಂದು ಜಾರಂ ಶೆಟ್ಟಿಯ ಮನೆಯವರ ಬಳಿ ವಿಚಾರಿಸಿದ್ದು ಕೋಣ ಹಿಡಿಯಲು ಬಂದಿದ್ದವರ ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದಾರೆ .ಹಂತಕರ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಕೋಣವನ್ನು ಕೊಲೆಗೈದ ಮೂವರು ಯುವಕರು ತಾವು ಬಂದಿದ್ದ ಸ್ಕೂಟರನ್ನು ಜಯರಾಮ್ ಶೆಟ್ಟಿ ಮನೆಯ ಮುಂದೆಯೇ ಬಿಟ್ಟು ಪರಾರಿಯಾಗಿದ್ದಾರೆ ಸ್ಕೂಟರ್ನಲ್ಲಿ 23 ನಂಬರ್ ಪ್ಲೇಟ್ ದೊರಕಿದೆ ಕೊಲೆ ಯಾದ ಕೋಣವನ್ನು ಮಹಜರು ನಡೆಸಲಾಗುತ್ತಿದೆ ಕೈಗೆ ಸಿಗದೆ ಓಡಾಡುತ್ತಿದ್ದ ಬೀಡಾಡಿ ಕೋಣವನ್ನು ಸ್ಥಳೀಯರೇ ಸೇರಿ ಕೊಲ್ಲಿಸಿದ್ದಾರೆ ಎನ್ನಲಾಗುತ್ತಿದೆ ಇದೀಗ ಹಂತಕರನ್ನು ಕೂಡಲೇ ಪತ್ತೆ ಹಚ್ಚುವಂತೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.