News Karnataka Kannada
Saturday, May 04 2024
ಮಂಗಳೂರು

ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಶೇಣಿ ಸಂಸ್ಮರಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Ujire
Photo Credit :

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ ) ವತಿಯಿಂದ ಶೇಣಿ ಗೋಪಾಲಕೃಷ್ಣ ಭಟ್ ಚಾ ರಿಟೇಬಲ್ ಟ್ರಸ್ಟ್ ಉಜಿರೆ ಘಟಕ ,ಶ್ರೀ ಜನಾರ್ದನ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ),ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಜಿರೆಯ ಯಕ್ಷಜನ ಸಭಾ ಸಹಯೋಗದೊಂದಿಗೆ ನಡೆದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದನ್ವಯ ಮೇ 22 ರಿಂದ 29 ರ ವರೆಗೆ ಪ್ರತಿ ಸಂಜೆ 5 ರಿಂದ ನಾಡಿನ ಖ್ಯಾತ ಹರಿದಾಸರಿಂದ ಮರ್ಯಾದಾ ಪುರುಷೋತ್ತಮ “ಶ್ರೀ ರಾಮ “ನ ಕುರಿತಾದ ಪೌರಾಣಿಕ ಪ್ರಸಂಗಗಳ ಹರಿಕಥಾ ಸಪ್ತಾಹ ಯಶಸ್ವಿಯಾಗಿ ಸುಸಂಪನ್ನಗೊಂಡಿತು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ಸಪ್ತಾಹವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಕೋರಿದ್ದರು. ಕಾರ್ಕಳದ ಹರಿದಾಸ ಅನಂತ ಪದ್ಮನಾಭ ಭಟ್ ಅವರಿಂದ” ಶ್ರೀ ರಾಮ ಜನ್ಮ-ಸೀತಾ ಕಲ್ಯಾಣ “ಕುರಿತು ,ಕುಂಬ್ಳೆಯ ಹರಿದಾಸ ಶಂ .ನಾ .ಅಡಿಗ ಅವರಿಂದ “ಶ್ರೀ ರಾಮ-ವನ ಗಮನ ” ಕುರಿತು ,ಹರಿದಾಸ ಡಾ! ಎಸ್ .ಪಿ .ಗುರುದಾಸ್ ಅವರಿಂದ “ವಾಲಿಮೋಕ್ಷ ” ಕುರಿತು, ಹರಿದಾಸೆ ಶ್ರೀಮತಿ ಮಂಜುಳಾ ಜಿ.ರಾವ್ ಅವರಿಂದ “ಚೂಡಾಮಣಿ “ಕುರಿತು , ಹರಿದಾಸ ಪಿ.ವಿ.ರಾವ್ ಅವರಿಂದ “ಸೇತು ಬಂಧನ ” ಕುರಿತು , ಹರಿದಾಸೆ ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ “ರಾವಣ ಮೋಕ್ಷ “ಕುರಿತು ಹಾಗೂ ಹರಿದಾಸ ದೇವಕಿ ತನಯ ಕೂಡ್ಲು ಅವರಿಂದ ‘ಶ್ರೀ ರಾಮ ಪಟ್ಟಾಭಿಷೇಕ”ಕಥಾಭಾಗದ ಹರಿಕಥಾ ಪ್ರಸಂಗ ನಡೆಯಿತು.

ಸಹಕಲಾವಿದರಾಗಿ ಮನೋಹರ ರಾವ್,ಸತ್ಯನಾರಾಯಣ ಐಲ ,ರಮೇಶ್ ಹೆಬ್ಬಾರ್, ಜಗದೀಶ್ ಉಪ್ಪಳ, ಮಂಗಲದಾಸ ಗುಲ್ವಾಡಿ ಮತ್ತು ಪ್ರದೀಪ್ ಉಪಾಧ್ಯಾಯ ಸಹಕರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು