ಉಜಿರೆ: ಶರತ್ ಶೆಟ್ಟಿ ಪಡುಪಳ್ಳಿ ಸಾಹಿತ್ಯ ರಚಿಸಿದ ರವಿರಾಜ್ ಶೆಟ್ಟಿ ಒಡಿಯೂರು ರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ಒದಗಿಸಿ ಉಜಿರೆಯ ಅಕ್ಷ ಡಿಜಿಟಲ್ ಸ್ಟುಡಿಯೋದಲ್ಲಿ ನಿರ್ಮಿಸಿದ ಕುಮಾರಿ ಯಜ್ಞ ಶೆಟ್ಟಿ ಉಜಿರೆ ಹಾಡಿರುವ ಆರ್ .ಜೆ.ಕ್ರಿಯೇಷನ್ಸ್ ಮೂಲಕ ಯೂ ಟ್ಯೂಬ್ ಚಾನೆಲ್ ಗೆ ಸಿದ್ಧಗೊಳಿಸಿದ ಉಜಿರೆ ಶ್ರೀ ಜನಾರ್ದನ ಸ್ವಾಮಿಯ ಕುರಿತಾದ ಕನ್ನಡ ಭಕ್ತಿಗೀತೆಗಳ ಕೃತಿ “ಜಯ ಹರಿ ಗೋವಿಂದ ” ನ್ನು ಮೇ 29 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಶೇಣಿ ಸಂಸ್ಮರಣೆ-ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಆರ್ .ವಾಸುದೇವ, ನ್ಯಾಯವಾದಿ ಬಿ.ಕೆ.ಧನಂಜಯ ರಾವ್, ಪ್ರಶಸ್ತಿ ಪುರಸ್ಕೃತ ಉಜಿರೆ ವಾಸುದೇವ ಆಚಾರ್ಯ ದಂಪತಿ, ಟ್ರಸ್ಟ್ ಕಾರ್ಯದರ್ಶಿ ಪಿ.ವಿ.ರಾವ್, ದಿವಾಕರ ಆಚಾರ್ಯ ಗೇರುಕಟ್ಟೆ,ಕೂಡ್ಲು ಮಹಾಬಲ ಶೆಟ್ಟಿ, ಸರ್ಪನ್ಗಳ ಈಶ್ವರ ಭಟ್ ,ಹಾಡಿಗೆ ಧ್ವನಿ ನೀಡಿದ ಯಜ್ಞ ಶೆಟ್ಟಿ ಮತ್ತು ಹೆತ್ತವರು ಉಪಸ್ಥಿತರಿದ್ದರು.