News Karnataka Kannada
Saturday, April 27 2024
ಮಂಗಳೂರು

ವೇಣೂರು: ಯುಗಲ ಮುನಿಗಳ ಮಂಗಳ ಪ್ರವಚನ ಕಾರ್ಯಕ್ರಮ

Swamiji
Photo Credit :

ವೇಣೂರು : ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ದೃಢ ನಂಬಿಕೆಯಿಂದ ಧರ್ಮದ ಮರ್ಮವನ್ನರಿತು ನಿತ್ಯವೂ ಬದುಕಿನಲ್ಲಿ ಶ್ರದ್ಧಾ-ಭಕ್ತಿಯಿಂದ ಅನುಷ್ಠಾನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂದು ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಹೇಳಿದರು.

ಅವರು ವೇಣೂರಿನಲ್ಲಿ ಬಾಹುಬಲಿ ಕ್ಷೇತ್ರದಲ್ಲಿ ಮಂಗಲ ಪ್ರವಚನ ನೀಡಿದರು.ಆಗಮಗಳಲ್ಲಿ ಮುನಿಗಳ ಧರ್ಮ ಮತ್ತು ಶ್ರಾವಕರ ಧರ್ಮವನ್ನು ಉಲ್ಲೇಖಿಸಲಾಗಿದೆ. ಮುನಿಗಳ ಧರ್ಮವು ಅನುಷ್ಠಾನಕ್ಕೆ ಕಷ್ಟವಾಗಿದೆ. ಆದರೆ, ಶ್ರಾವಕರ ಧರ್ಮ ಸರಳವಾಗಿದ್ದು ಶ್ರಾವಕರು ನಿತ್ಯವೂ ಧರ್ಮದ ಪರಿಪಾಲನೆ ಮಾಡಬೇಕು. ಶ್ರಾವಕರು ಜಪ, ತಪ, ಧ್ಯಾನ, ಮುನಿಸೇವೆ, ದೇವರ ದರ್ಶನ ಸ್ವಾಧ್ಯಾಯ ಮೊದಲಾದ ಷಟ್ಕರ್ಮಗಳನ್ನು ಶ್ರದ್ಧೆಯಿಂದ ಮಾಡಿ ದುರ್ಲಭವಾದ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಪ್ರವಚನ ನೀಡಿ, ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ  ಎಂಬ ರತ್ನತ್ರಯ ಧರ್ಮದ ಪಾಲನೆಯಿಂದ ಪುಣ್ಯ ಸಂಚಯವಾಗುತ್ತದೆ. ಸ್ವಾಧ್ಯಾಯದೊಂದಿಗೆ ಜ್ಞಾನ ಭಂಡಾರವನ್ನು ವೃದ್ಧಿಸಿಕೊಂಡು ಉತ್ತಮ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಿತ್ಯವೂ ದೇವರ ದರ್ಶನ, ಧ್ಯಾನ ಮಾಡಿ ಸತ್ಕಾರ್ಯಗಳಲ್ಲಿ ತೊಡಗಿದರೆ ಹಾಗೂ ತೀರ್ಥ ಕ್ಷೇತ್ರಗಳ ದರ್ಶನ ಮಾಡಿದರೆ, ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳೀದರು.

ಮೂಡಬಿದ್ರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು. ವೇಣೂರಿನಲ್ಲಿ ಯುಗಲ ಮುನಿಗಳು ಭಗವಾನ್ ಬಾಹುಬಲಿ ದರ್ಶನ ಹಾಗೂ ಎಲ್ಲಾ ಬಸದಿಗಳ ದರ್ಶನ ಮಾಡಿದ ಬಳಿಕ ಮಂಗಳವಾರ ಪರುಷ ಗುಡ್ಡೆ ಬಸದಿಯಲ್ಲಿ ತಂಗಿದರು. ಇಂದು ನಾರಾವಿಗೆ ಹೋಗಿ ಗುರುವಾರ ಕಾರ್ಕಳ ಪುರಪ್ರವೇಶ ಮಾಡುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು