ಬೆಳ್ತಂಗಡಿ : ಮೊಬೈಲ್ ಸಂಸ್ಕೃತಿಯಿಂದ ಓದು ಕಡಿಮೆಯಾಗುತ್ತಿದೆ, ಓದಿನಿಂದ ಸಮಯ ಕಳೆಯುವ ಜತೆ ಜ್ಞಾನವು ವೃದ್ಧಿಸುತ್ತದೆ. ಪುಸ್ತಕಗಳನ್ನು ಹೆಚ್ಚು ಓವುದರಿಂದ ಜೀವನಕ್ಕೆ ಸರಿಯಾದ ದಿಕ್ಕು ಸಿಗಲು ಸಾಧ್ಯವಿದೆ ಎಂದು ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಶನಿವಾರ ಉಜಿರೆ ಗ್ರಾಮಪಂಚಾಯತಿ ವ್ಯಾಪ್ತಿಯ ಬಸ್ ನಿಲ್ದಾಣ ಹಾಗೂ ಓಡಲದಲ್ಲಿ ಪುಸ್ತಕ ಗೂಡು ಉದ್ಘಾಟಿಸಿ ಮಾತನಾಡಿದರು.
ತಾಪಂ ಇಒ ಕುಸುಮಾಧರ, ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರಕಾಶ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಜಯಂತ ಯುಬಿ ವಂದಿಸಿದರು.