ಬೆಳ್ತಂಗಡಿ : ದುಬಾಯಿಯ ಪಾರ್ಕ್ ಹಯಾತ್ ಮೈನ್ಬಲ್ರೂಮ್ ದುಬಾಯಿ ಕ್ರೀಕ್ ನಲ್ಲಿ ಡಿ. 26 ರಂದು ನಡೆದ ವಿಶೇಷ ಸಂಭ್ರಮ ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನೀಡಲು ಭಾರತದಿಂದ ಆಹ್ವಾನಿತರಾಗಿದ್ದ, ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಸಂಗಡಿಗರಿಗೆ ದುಬಾಯಿಯಲ್ಲಿ ಸನ್ಮಾನ ನಡೆಯಿತು.
ಸಮಾರಂಭದಲ್ಲಿ ದುಬಾಯಿ ದೇವಾಡಿಗರ ಸಂಘದ ಅಧ್ಯಕ್ಷ ದಿನೇಶ್ ದೇವಾಡಿಗ, ಅಖಿಲ ಭಾರತ ತುಳುಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮುಂಬೈ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ರವಿ ದೇವಾಡಿಗ ಮುಂಬೈ, ಉದ್ಯಮಿಗಳಾದ ನಾರಾಯಣ ದೇವಾಡಿಗ ಮತ್ತು ಸುರೇಶ್ ದೇವಾಡಿಗ ದುಬಾಯಿ ಅವರು ಈ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಡಿ.ಬಿ ಪ್ರಕಾಶ ದೇವಾಡಿಗ, ಪಿ ಹರಿದಾಸ ಡೋಗ್ರ ಬೆಳ್ತಂಗಡಿ, ಹೊನ್ನಪ್ಪ ದೇವಾಡಿಗ ಬಳ್ಳಮಂಜ ಮತ್ತು ಸುಮನ್ ರಾಜರತ್ನಂ ದೇವಾಡಿಗ ಅವರು ಸಂಘಟಕರ ಆತ್ಮೀಯತೆಗೆ ಕೃತಜ್ಞತೆ ವ್ಯಕ್ತಪಡಿಸಿದರು.