ಬೆಳ್ತಂಗಡಿ : ಲಾಯಿಲ ಸಿ .ಕೆ. ಯಸ್. ಕೆ. ವಿಮುಕ್ತಿ ದಯಾ ವಿಶೇಷ ಮಕ್ಕಳ ಶಾಲೆಗೆ ಭಾರತೀಯ ಜೀವ ವಿಮಾ ನಿಗಮದ ಗೋಲ್ಡನ್ ಜುಬಿಲಿ ಫೌಂಡೇಶನ್ ವತಿಯಿಂದ ಶಾಲಾ ಬಸ್. ಹಸ್ತಾಂತರ ಫೆ. 14. ರಂದು ನಡೆಯಿತು.
ಜೀವ ವಿಮಾ ನಿಗಮ ಉಡುಪಿ ವಿಭಾಗಾಧಿಕಾರಿ ಬಿಂದು ರೋಬರ್ಟ್ ವಾಹನದ ಕೀ ಯನ್ನು ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ರಿಗೆ ಹಸ್ತಾಂತರ ಮಾಡಿದರು. ಜೀವ ವಿಮಾ ನಿಗಮದ ಮಾರ್ಕೆಟಿಂಗ್ ಮೆನೇಜರ್ ರಮೇಶ್ ಭಟ್, ಮ್ಯಾನೇಜರ್ ಸೇಲ್ಸ್ ಸದಾಶಿವ ಭಟ್, ಬಂಟ್ವಾಳ್ ಯಲ್ ಐ ಸಿ ಚೀಫ್ ಮ್ಯಾನೇಜರ್ ಪಿ. ಸಿ. ನಾಯಕ್.ಬೆಳ್ತಂಗಡಿ ಉಪ ಶಾಖೆಯ ಮೆನೇಜರ್ ದೇವಪ್ಪ ನಾಯ್ಕ, ಅಭಿವೃದ್ಧಿ ಅಧಿಕಾರಿಗಳಾದ ಎ. ಜಯದೇವ, ರಾಘವೇಂದ್ರ ಟಿ. ಡಿ., ಉದಯ ಶಂಕರ್,ದಿನೇಶ್ ಯಂ,ಹರೀಶ್ ಪೈ, ಸತೀಶ್, ನಾರಾಯಣ ಯನ್, ಸಿಬ್ಬಂದಿಗಳು, ವಿಮಾ ಪ್ರತಿನಿಧಿಗಳು ವಿಮುಕ್ತಿ ದಯಾ ಶಾಲೆಯ ಶಿಕ್ಷಕರರು, ಹೆತ್ತವರು, ಮಕ್ಕಳು ಹಾಜರಿದ್ದರು.