ಬೆಳ್ತಂಗಡಿ: ಸೇವಾಭಾರತಿ ಇದರ ಸೌತಡ್ಕ ಸೇವಾಧಾಮದಲ್ಲಿ ದಾನಿಗಳಾದ ಪಿ. ರಾಮದಾಸ್ ಇವರ ವತಿಯಿಂದ ಗಾಲಿ ಕುರ್ಚಿಯನ್ನು ಸಾಂಕೇತಿಕವಾಗಿ ಸೇವಾಭಾರತಿಯ ಅಧ್ಯಕ್ಷರು ಕೆ.ವಿನಾಯಕರ ರಾವ್ ಅವರಿಗೆ ಹಸ್ತಾಂತರ ಮಾಡಿ, ಸೇವಾಭಾರತಿ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಈ ವೇಳೆ ಫಲಾನುಭವಿಗಳಾದ ಕೃಷ್ಣಮೂರ್ತಿ ಸಕಲೇಶಪುರ ಇವರಿಗೆ ಗಾಲಿಕುರ್ಚಿಯನು ಹಸ್ತಾಂತರಿಸಲಾಯಿತು.ಸೇವಾಧಾಮದ ಸಿಬಂದಿ ಚರಣ್ ಕುಮಾರ್ ಇವರು ಒಂದು ವರುಷದ ಕಾರ್ಯಚಟುವಟಿಕೆ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪಿ. ರಾಮದಾಸ್, ಮ್ಯಾನೇಜಿಂಗ್ ಡೈರೆಕ್ಟರ್ ACE manufacturing PVT LTD ಹಾಗೂ ಕುಟುಂಬದವರು, ಸೇವಾಭಾರತಿಯ ಅಧ್ಯಕ್ಷ ಕೆ. ವಿನಾಯಕ್ ರಾವ್,ಸಂಚಾಲಕರಾದ ಕೆ. ಪುರಂದರ್ ರಾವ್, ಸೇವಾಧಾಮದ ಮೆಂಟರ್ ಬಾಲಕೃಷ್ಣ, ಗಣ್ಯರು, ಸೇವಾಭಾರತಿಯ ಕಾರ್ಯಕರ್ತರು ,ಮತ್ತು ಸನಿವಾಸಿಗಳು ಅವರ ಪೋಷಕರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸನಿವಾಸಿ ಮೋಹನ್ ಅರಿಯಡ್ಕ ಅವರು ಸ್ವಾಗತಿಸಿ ನಿರೂಪಿಸಿದರು, ಕೆ. ಪುರಂದರ ರಾವ್ ಸಂಚಾಲಕರು ಸೇವಾಧಾಮ ಧನ್ಯವಾದವಿತ್ತರು.