News Karnataka Kannada
Saturday, April 27 2024
ಅಂಕಣ

ಮಲಬದ್ಧತೆ ಮೂಲ ಕಾರಣ ತಿಳಿದುಕೊಂಡು ಔಷಧಿ ಸೇವಿಸಿ

Swathi Column 20 01 2022
Photo Credit :

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರನ್ನು ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬದಲಾದ ಜೀವನಶೈಲಿಯಾಗಿದೆ.

ಮಲಬದ್ಧತೆಯು ಅಸಿಡಿಟಿ, ಮೂಲವ್ಯಾಧಿ, ಗೆಡ್ಡೆ ಗಳ ಸಮಸ್ಯೆಯಿಂದ ಕಾಡುವ ಸಾಧ್ಯತೆ ಇರುತ್ತದೆ.
ಇಂತಹ ಸಮಸ್ಯೆ ಉಳ್ಳವರು ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಸ್ವ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.ಬದಲಾದ ಆಹಾರ ಪದ್ಧತಿ ಉತ್ತಮ ನಿದ್ರೆ ಮಾಡದೆ ಇರುವುದರಿಂದ ಈ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ದಮ್ಮ ಜೀರ್ಣಕ್ರಿಯೆಯೂ ಉತ್ತಮವಾಗಿ ನಡೆಯದಿದ್ದರೆ ಕೂಡ ಮಲಬದ್ಧತೆಯು ಕಾಣಿಸಿಕೊಳ್ಳುತ್ತದೆ.
ಮಲಬದ್ಧತೆ ಸಮಸ್ಯೆ ಉಳ್ಳವರು ಮುಖ್ಯವಾಗಿ ಈ ಸಮಸ್ಯೆ ಆರಂಭವಾದ ಕ್ಷಣದಲ್ಲಿ ವೈದ್ಯರನ್ನು ಭೇಟಿಯಾಗುವುದು ಉತ್ತಮ. ವೈದ್ಯರು ಯಾವ ಮೂಲ ಕಾರಣದಿಂದ ಈ ಸಮಸ್ಯೆಯು ಎದುರಾಗಿದೆ ಎಂದು ಹೇಳಿದ ಬಳಿಕವಷ್ಟೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ನಾವು ಸೇವಿಸುವಂತಹ ಆಹಾರದಲ್ಲಿ ಹೆಚ್ಚಾಗಿ ನಾರಿನಾಂಶಗಳಿರುವಂತಹ ಆಹಾರವನ್ನು ಸೇವಿಸಿದರೆ ಮಲಬದ್ಧತೆಯಿಂದ ಸಮಸ್ಯೆಯಿಂದ ದೂರವಿರಬಹುದು.ಅದೇ ರೀತಿ ಸೊಪ್ಪು-ತರಕಾರಿ ಗಳನ್ನು ಉತ್ತಮ ರೀತಿಯಲ್ಲಿ ಸೇವಿಸಬೇಕು. ಸಾಮಾನ್ಯವಾಗಿ ಮಾಂಸಾಹಾರ ಸೇವಿಸುವವರಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಇದಕ್ಕೆ ಮುಖ್ಯ ಕಾರಣ ಅವರು ಮಾಂಸಾಹಾರದ ಜೊತೆಗೆ ಸಸ್ಯಾಹಾರವನ್ನು ಸೇವಿಸದಿರುವುದು. ಎರಡನ್ನೂ ಧಾರಾಳವಾಗಿ ಸೇವಿಸಿದರೆ ಮಲಬದ್ಧತೆ ಸಮಸ್ಯೆಯಿಂದ ದೂರವಿರಬಹುದು.

ಹಾಗೆಯೇ ನಮ್ಮ ಶರೀರಕ್ಕೆ ಅಗತ್ಯಕ್ಕಿಂತ ಜಾಸ್ತಿ ಆಹಾರವನ್ನು ನೀಡಿದರೆ ಕೂಡ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗೆಯೇ ಆಹಾರವನ್ನು ಪದೇಪದೇ ಸೇವಿಸುವುದರಿಂದಲೂ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಮೂಡಬಿದ್ರೆಯ ಕಾಕುಂಜೆ ಆಯುರ್ವೇದ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ ಅನುರಾಧ ಹೇಳುತ್ತಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು