News Karnataka Kannada
Wednesday, May 01 2024
ಮಂಗಳೂರು

ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು: ಎನ್‌. ಶಶಿಕುಮಾರ್

Shashikumar
Photo Credit :

ಬೆಳ್ತಂಗಡಿ: ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು. ಗ್ರಾಹಕರ‌‌ ಮನೋಭಾವಕ್ಕನುಗುಣವಾಗಿ ನಮ್ಮ ವೃತ್ತಿಯಲ್ಲಿ‌ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ ಎಂದು ದ.ಕ.ಜಿಲ್ಲಾ ಪೋಲಿಸ್ ಕಮಿಶನರ್ ಎನ್‌. ಶಶಿಕುಮಾರ್ ಹೇಳಿದರು.

ಅವರು, ಬುಧವಾರ ಉಜಿರೆ ರುಡ್ ಸೆಟ್ಯಲ್ಲಿ ಮೆನ್ಸ್ ಪಾರ್ಲರ್ ಮತ್ತು‌ ಸೆಲೂನ್ ಉದ್ಯಮಿಗಳ 30 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ತರಬೇತುಗೊಂಡವರಿಗೆ ಪ್ರಮಾಣ ಪತ್ರಗಳನ್ನು‌ ವಿತರಿಸಿ ಮಾತನಾಡಿದರು.

ಗ್ರಾಹಕರ ತೃಪ್ತಿಯೇ ನಮಗೆ ಆಧಾರ. ಸೆಲೂನ್‌ಗೆ ಬರುವವರಲ್ಲಿ ಚೆನ್ನಾಗಿ ಮಾತನಾಡಿ, ಸೆಳೆಯುವುದೂ ಒಂದು ಕಲೆಯೇ ಆಗಿದೆ. ಸ್ವಂತ ಉದ್ಯೋಗ ಮಾಡುವುದರಿಂದ ತನಗೆ ಮಾತ್ರವಲ್ಲದೆ ತನ್ನನ್ನು ನೆಚ್ಚಿಕೊಂಡ ಕುಂಟುಂಬಕ್ಕೂ ಸ್ಥೈರ್ಯ ತುಂಬುತ್ತದೆ. ಕೇವಲ ಬೆಳಿಗ್ಗೆ ಕಚೇರಿಗೆ ತೆರಳಿ, ಸಂಜೆ‌ ಮರಳಿ ಬರುವುದರಲ್ಲಿಯೇ ಜೀವನ ಕಳೆದು ಹೋಗಬಾರದು. ಸ್ವ ಉದ್ಯೋಗವು ಸೃಜನಶೀಲತೆಗೆ ದಾರಿಮಾಡಿಕೊಡುತ್ತದೆ ಎಂದ ಅವರು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದ ರುಡ್‌ಸೆಟಿಯಿಂದ‌ ಬಡತನದ ವಿಮೋಚನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ರುಡ್ ಸೆಟ್ಯ ಕಾರ್ಯನಿರ್ವಾಹಕ‌ ನಿರ್ದೇಶಕ ಗಿರಿಧರ ಕಲ್ಲಾಪುರ ವಹಿಸಿದ್ದರು. ವೇದಿಕೆಯಲ್ಲಿ ಕೇಶ ಶೃಂಗಾರ ಸಂಸ್ಥೆ “ಸ್ಪಿನ್” ಸಹಸಂಸ್ಥಾಪಕ ಮಹೇಶ್, ತರಬೇತುದಾರರಾದ ನವೀನ್, ಶ್ರೀನಿವಾಸ, ರುಡ್‌ಸೆಟಿ ನಿರ್ದೇಶಕ ಎಮ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ತರಬೇತಿಯಲ್ಲಿ 35 ಮಂದಿ ಭಾಗವಹಿಸಿದ್ದರು. ನಾಗೇಂದ್ರ ಹಾಗೂ ವಿರೂಪಾಕ್ಷ ಅನಿಸಿಕೆ‌ ವ್ಯಕ್ತಪಡಿಸಿದರು. ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಸ್ವಾಗತಿಸಿ, ಕಾರ್ಯಕ್ರಮ‌ ನಿರ್ವಹಿಸಿದರು. ಉಪನ್ಯಾಸಕಿ ಅನಸೂಯಾ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು