ಬೆಳ್ತಂಗಡಿ: ಮುಂಡಾಜೆ ಗ್ರಾಮದ ಮಿತ್ತೊಟ್ಟು ಮನೆ ನಿವಾಸಿ ಮನೋಹರ(31) ಮನೆಯಿಂದ ಪೇಟೆಗೆ ಹೋದವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
ಈತ ಮಾ. 16ರಂದು ಮನೆಯಿಂದ ಪೇಟೆಗೆಂದು ತನ್ನ ಸಹೋದರನ ಸ್ಕೂಟರ್ ನಲ್ಲಿ ಹೋದವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ.
ಮೊಬೈಲ್ ಕರೆಯನ್ನು ಸ್ವೀಕರಿದೆ ಇದ್ದು ಯಾವುದೇ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ ಎಂದು ಈತನ ಅಣ್ಣ ಮಂಜುನಾಥ ಆಚಾರ್ಯ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.