News Karnataka Kannada
Friday, May 03 2024
ಮಂಗಳೂರು

ಮುಂಡಾಜೆ ಆಸುಪಾಸಿನ ಗ್ರಾಮಗಳಲ್ಲಿ ಒಂಟಿ ಸಲಗ ಸಂಚಾರ: ತೋಟಕ್ಕೆ ಹಾನಿ

Local News
Photo Credit : News Kannada

ಬೆಳ್ತಂಗಡಿ : ತಾಲೂಕಿನ ಮುಂಡಾಜೆ ಆಸುಪಾಸಿನ ಚಿಬಿದ್ರೆ, ತೋಟತ್ತಾಡಿ, ಕಡಿರುದ್ಯಾವರ, ಗ್ರಾಮಗಳಲ್ಲಿ ಗುರುವಾರ ಹಾಗೂ ಶುಕ್ರವಾರ ರಾತ್ರಿ ಒಂಟಿ ಸಲಗ ಸಂಚಾರ ನಡೆಸಿದೆ. ಕಡಿರುದ್ಯಾವರ ಗ್ರಾಮದ ಹೇಡ್ಯ ಸಮೀಪದ ಲಿಜೋ ಎಂಬವರ ತೋಟದಲ್ಲಿ ಫಲಬರುವ 5 ತೆಂಗಿನ ಮರಗಳನ್ನು ಒಂಟಿ ಸಲಗ ಮುರಿದು ಹಾಕಿದೆ.

ಗುರುವಾರ ರಾತ್ರಿ ತೋಟತ್ತಾಡಿ,ಚಿಬಿದ್ರೆ ಮಾಕಳ ಮೊದಲಾದ ಪ್ರದೇಶಗಳಲ್ಲಿ ಸಂಚಾರ ನಡೆಸಿದ ಕಾಡಾನೆ, ಬಳಿಕ ಇಲ್ಲಿಯ ಖಾಸಗಿ ನರ್ಸರಿಯೊಂದರಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗಿ ಮೃತ್ಯುಂಜಯ ನದಿದಾಟಿ ನಳೀಲು ಕಡೆ ಹೋಗಿರುವ ಕುರುಹುಗಳು ಪತ್ತೆಯಾಗಿದ್ದವು.

ಶುಕ್ರವಾರ ಕಡಿರುದ್ಯಾವರ ಗ್ರಾಮದ ಹೇಡ್ಯ, ಜೋಡುನೆರಳು ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿ ಬಳಿಕ ಲಿಜೋ ಅವರ ತೋಟಕ್ಕೆ ನುಗ್ಗಿ ಹಾನಿ ಉಂಟುಮಾಡಿದೆ. ಫೆಬ್ರವರಿ ಹಾಗೂ ಮಾರ್ಚ್ ಪ್ರಥಮ ವಾರ ಮುಂಡಾಜೆ ಪ್ರದೇಶದ ದುಂಬೆಟ್ಟುವಿನಲ್ಲಿ ಸತತ 18 ದಿನಗಳ ಕಾಲ ಕಾಡಾನೆ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟುಮಾಡಿತ್ತು.

ಕಾಡಾನೆಗಳ ಉಪಟಳ ಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆಯ ಡಿ.ಎಫ್.ಒ ಡಾ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಾಗರಹೊಳೆಯಿಂದ ಪರಿಣಿತ ಆನೆ ಕಾವಾಡಿಗರನ್ನು ಕರೆಸಿತ್ತು.ಅವರು ಆಗಮಿಸಿದ ಬಳಿಕ ಇಲ್ಲಿನ ಯಾವುದೇ ಗ್ರಾಮಗಳಲ್ಲಿ ಕಾಡಾನೆ ಸಂಚಾರ ಕಂಡುಬಾರದ ಕಾರಣ ಒಂದು ವಾರ ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಸುತ್ತಾಟ ನಡೆಸಿ ಆನೆಗಳ ಜಾಡು ಕಂಡುಬರದ ಕಾರಣ ಹಿಂದಿರುಗಿದ್ದರು. ಅವರು ಮರಳಿದ 10 ದಿನಗಳ ಬಳಿಕ ಕಾಡಾನೆ ಮತ್ತೆ ಕಂಡುಬಂದಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು