News Karnataka Kannada
Thursday, May 09 2024
ಮಂಗಳೂರು

‘ಮಹಾನ್ ಕೆಲಸಗಳನ್ನು ಮಾಡಿ ಇತಿಹಾಸದ ಪುಸ್ತಕದಲ್ಲಿ ಸೇರಿಕೊಳ್ಳಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರು ಉದಾಹರಣೆ’

New Project 2021 10 20t133954.919
Photo Credit :

ಮಂಗಳೂರು: ಒಬ್ಬ ವ್ಯಕ್ತಿ ತನ್ನ ಯೋಚನೆಗಳನ್ನು ಯಾವೆಲ್ಲ ರೀತಿಯಲ್ಲಿ ಬದಲಾಯಿಸಬಹುದು ಎಂಬುದನ್ನು ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಹೇಗೆ ಮಹಾನ್ ಕೆಲಸಗಳನ್ನು ಮಾಡಿ ಇತಿಹಾಸದ ಪುಸ್ತಕದಲ್ಲಿ ಸೇರಿಕೊಳ್ಳಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರು ಉದಾಹರಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ‌ಕೆ.ವಿ ಹೇಳಿದರು.
ಅವರು ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ದಿನ ಅತಿಥಿಯಾಗಿ ಆಗಮಿಸಿ‌ ಮಾತನಾಡಿದರು.ಮಹಾಭಾರತ ರಾಮಾಯಣ ದಂತಹ ಧಾರ್ಮಿಕ ಪುಸ್ತಕದಲ್ಲಿ ಯಾವರೀತಿಯ ಜೀವನ ಪಾಠಗಳು ಇವೆ ಅದನ್ನು ಕೇವಲ ಒಂದು ಧರ್ಮಕ್ಕೆ ಎಂದು ಸೀಮಿತ ಪಡಿಸದೆ ಅದರಲ್ಲಿರುವ ಜೀವನ ಪಾಠವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು‌ ಹೇಳಿದರು.
ಮಹಾಭಾರತ ರಾಮಾಯಣ ದಂತಹ ಧಾರ್ಮಿಕ ಪುಸ್ತಕದಲ್ಲಿ ಯಾವರೀತಿಯ ಜೀವನ ಪಾಠಗಳು ಇವೆ ಅದನ್ನು ಕೇವಲ ಒಂದು ಧರ್ಮಕ್ಕೆ ಎಂದು ಸೀಮಿತ ಪಡಿಸದೆ ಅದರಲ್ಲಿರುವ ಜೀವನ ಪಾಠವನ್ನು ಅಳವಡಿಸಿಕೊಳ್ಳಬೇಕು ಎಂದು‌ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರಿಕೆ, ಬಂದರು‌ ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ  ಮಾತನಾಡಿ, ಬೇಡರ ಜನಾಂಗದಲ್ಲಿ ಹುಟ್ಟಿ ಬಂದಂತಹ ವಾಲ್ಮೀಕಿಯನ್ನು ಯಾರು ಬೇಡರ ವಾಲ್ಮೀಕಿ ಎಂದು ಕರೆಯುವುದಿಲ್ಲ ಬದಲಾಗಿ ಮಹಾಕವಿ ವಾಲ್ಮೀಕಿ ಎಂದು ಕರೆಯುತ್ತಾರೆ ಜಾತಿಗಳು ಮುಖ್ಯವಲ್ಲ ಬದಲಾಗಿ ನೀತಿಗಳ ಮೂಲಕ ಬದುಕುವುದು ಮುಖ್ಯವಾಗಿರುತ್ತದೆ ಎಂದರು.

ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಘಟನೆಗಳ ಕುರಿತು ವಾಲ್ಮೀಕಿಯವರು ಕಾವ್ಯದ ಮುಖಾಂತರ ಬರೆಯುವ ಕಾರ್ಯವನ್ನು ಮಾಡಿದ್ದಾರೆ
ಈ ಮಹಾಕಾವ್ಯವು ಅಂದಿನ ಕಾಲಕ್ಕೆ ಪೂರಕವಾಗಿತ್ತು ಅದೇ ರೀತಿ ಇಂದಿಗೂ ಅಷ್ಟೇ ಬಹಳ ಪೂರಕವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು