ಬೆಳ್ತಂಗಡಿ : ಚಾತುರ್ಮಾಸ್ಯದ ಪವಿತ್ರ ಪರ್ವ ಕಾಲದ 29ನೇ ದಿನದಂದು ಮಾಜಿ ಸಚಿವ ರಮಾನಾಥ ರೈ ಮತ್ತು ತಂಡದವರು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಶ್ರೀ ಗುರುದೇವ ಮಠದಲ್ಲಿ ಭೇಟಿಯಾಗಿ ಪಾದುಕಾ ಪೂಜೆ ನೆರವೇರಿಸಿ ಪೂಜ್ಯ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.
ನಾಯಕರುಗಳಾದ ಮಾಜಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ವಲಯ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಉದ್ಯಮಿ ಕೆ. ಸಂಜೀವ ಪೂಜಾರಿ, ಬಂಟ್ವಾಳ ಮಹಿಳಾ ಸೊಸೈಟಿಯ ಜಯಂತಿ ಪೂಜಾರಿ , ಬಂಟ್ವಾಳ ನಗರಸಭೆ ಕೌನ್ಸಿಲರ್ ವಾಸು ಪೂಜಾರಿ, ಬಂಟ್ವಾಳ ತಾ.ಪಂ. ಸದಸ್ಯೆ ಮಲ್ಲಿಕಾ ವಿ ಶೆಟ್ಟಿ, ಕ್ಷೇತ್ರದ ಟ್ರಸ್ಟಿ ತುಕಾರಾಮ್ ಸಾಲಿಯಾನ್ ಉಪಸ್ಥಿತರಿದ್ದರು.