ಮಂಗಳೂರು ; ಪುತ್ತೂರಿನ ಬ್ರೈಟ್ ವಿದ್ಯಾ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಗಿದ್ದ ಕನ್ನಡ್ಕ ಗಣೀಶ ನಾಯಕ್ ಇಂದಾಜೆ (59)ನಗರದ ಖಾಸಗಿ ಆಸ್ಪತ್ರೆಯ ಲ್ಲಿಂದು ನಿಧನರಾಗಿದ್ದಾರೆ.
ದೆಹಲಿಯ ನ್ಯಾಶನಲ್ ಯೂತ್ ಪ್ರೊಜೆಕ್ಟ್ ನ ಜಿಲ್ಲಾ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿರುವ ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋ ತ್ಸವ ಸಮಿತಿಯ ಕಾರ್ಯ ದರ್ಶಿಯಾಗಿ, ಪುತ್ತೂರು ಗ್ರಾಹಕರ ವೇದಿಕೆ ಯ ಸದಸ್ಯ ರಾಗಿ ಮತ್ತು ಮಂಗಳೂರುರಿನ ಜಿಲ್ಲಾ ಆಸ್ಪತ್ರೆ ವೆನ್ಲಾಕ್ ನಲ್ಲಿ ಕೆಲಕಾಲ ಸ್ವಾಗತ ಕಾರಾಗಿ ಸೇವೆ ಸಲ್ಲಿಸಿರುತ್ತಾರೆ.
ಮ್ರತರು ಪತ್ನಿ, ಪುತ್ರ, ಪುತ್ರಿಹಾಗೂ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಸಹಿತ 8 ಸಹೋದರರು,5ಮಂದಿ ಸಹೋದರಿಯರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್ ,ಕರಾವಳಿ ಕಾಲೇಜು ಮತ್ತು ಸಮೂಹ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಗಣೇಶ್ ರಾವ್ ,ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ ಸಂತಾಪ ಸೂಚಿಸಿದ್ದಾರೆ.