ಉಜಿರೆ : ಸೇವಾ ಭಾರತಿ(ರಿ) ಕನ್ಯಾಡಿ ಇದರ ನೇತೃತ್ವದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 13ನೇ ವೈದ್ಯಕೀಯ ಶಿಬಿರವು ಮಾರ್ಚ್ 17 ರಂದು ಉಜಿರೆ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ನಡೆಯಲಿರುವುದು.
ಅನುಭವಸ್ಥ ತರಬೇತುದಾರರು,ಅನುಭವಿಗಳು, ತಜ್ಞ ವೈದ್ಯರುಗಳು ತ ಪಾಸಣೆ ನಡೆಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಶಿಬಿರ ಆ ಯೋಜಿಸಿದ್ದು ಈಗಾಗಲೇ ಒಂದು ಸುತ್ತು ಮನೆ ಭೇಟಿ ಮಾಡಲಾಗಿದೆ.
ಬೆನ್ನುಮೂಳೆ ಮುರಿತದ ಬಗ್ಗೆ ಜಾಗೃತಿ, ನಿರ್ವಹಣೆಗಳು ಸಂಘ-ಸಂಸ್ಥೆಗಳ , ಸರಕಾರದ ಜವಾಬ್ದಾರಿಗಳಾಗಿದ್ದು , ಶಿಬಿರಕ್ಕೆ ಕೆನರಾ ಸ್ಪೈನ್ ಫೋರಂ, ಮಂಗಳೂರು.,ಎಸ್ ಡಿ ಎಮ್ ಆಸ್ಪತ್ರೆ, ಉಜಿರೆ.,ಎಸ್.ಪಿ ಆಯಿಲ್ ಮಿಲ್,ಉಜಿರೆ., ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಃಶ್ಚೇತನ ಕೇಂದ್ರ, ಸೌತಡ್ಕ.,ಎ. ಪಿ. ಡಿ, ಬೆಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಬೆಳ್ತಂಗಡಿ. ಸಹಕಾರ ನೀಡಿ ಕೈಜೋಡಿಸಿದ್ದಾರೆ. ತಾಲೂಕಿನ ಬೆನ್ನುಮೂಳೆಮುರಿತಕ್ಕೊಳಗಾದ ದಿವ್ಯಾಂಗರು ಶಿಬಿರದ ಪ್ರಯೋಜನ ಪಡೆಯುವಂತೆ ಸೇವಾಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ .