ಉಜಿರೆ: ” ಆರೋಗ್ಯವೇ ಭಾಗ್ಯ, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರಿಲ್ಲ” ಎಂಬ ನಾಣ್ಣುಡಿಯಂತೆ ಶೈಶವ, ಬಾಲ್ಯವನ್ನು ಕಳೆದು ಪ್ರೌಢಾವಸ್ಥೆಗೆ ಕಾಲಿರಿಸುವ ಹೆಣ್ಣು ಮಕ್ಕಳಿಗೆ ಅವರ ಹದಿಹರೆಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ಹೆತ್ತವರು, ಶಿಕ್ಷಕರು, ಪೋಷಕರು ಮಕ್ಕಳಿಗೆ ನೆರವಾಗಬೇಕಾದದ್ದು ಅವರ ಆದ್ಯ ಕರ್ತವ್ಯ ಎಂದು ಧರ್ಮಸ್ಥಳ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಂಜು ಎಚ್. ಆರ್ ನುಡಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ಅವರ ಮಾರ್ಗದರ್ಶನ ಹಾಗು ಅಧ್ಯಕ್ಷತೆಯಲ್ಲಿ ನಡೆದ ಹೆಣ್ಣು ಮಕ್ಕಳ ಹದಿಹರೆಯ ಸಮಸ್ಯೆಯ ಬಗೆಗೆ ಏರ್ಪಡಿಸಲಾದ ಶಿಬಿರದಲ್ಲಿ ಮಾಹಿತಿ ನೀಡಿದರು.
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ವಿಜಯಲಕ್ಸ್ಮಿ ಅವರು ವಿದ್ಯಾರ್ಥಿನಿಯರಿಗೆ ಉತ್ತಮ ಸಲಹೆ ,ಸೂಚನೆಗಳನ್ನು ನೀಡಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಹೇಳಿ, ಅವರ ಸಮಸ್ಯೆ,ಸಂಶಯಗಳಿಗೆ ಸಮಾಧಾನಕರ ಉತ್ತರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು.
ಶಿಕ್ಷಕಿಯರಾದ ಮನೋರಮಾ ತೋಳ್ಪಡಿತ್ತಾಯ ಸ್ವಾಗತಿಸಿ, ಗಿರಿಜಾ ಕುಮಾರಿ ವಂದಿಸಿ, ಶ್ರೀಜಾ ಎ . ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.