ಮಂಗಳೂರು : ರಾಜ್ಯದಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಮಂಗಳೂರು ಪೋಲಿಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿಕೆ. ದ.ಕ ಜಿಲ್ಲೆ ಕೇರಳ ರಾಜ್ಯದ ಜೊತೆ ಸಾಕಷ್ಟು ರೀತಿಯಲ್ಲಿ ಸಂಪರ್ಕ ಹೊಂದಿದೆ. ರೋಡ್ ಹೊರತು ಪಡಿಸಿ ಕಾಲುದಾರಿ ಮೂಲಕ ಕೇರಳ ಜೊತೆ ಸಂಪರ್ಕವಿದೆ.
ದ.ಕ ಜಿಲ್ಲೆಯನ್ನ ಸಂಪರ್ಕಿಸುವ 7 ರಸ್ತೆಗಳು ಕಮೀಷನರೇಟ್ ವ್ಯಾಪ್ತಿಯಲ್ಲಿವೆ. ಅತಿಮುಖ್ಯವಾದ ತಲಪಾಡಿ ಚೆಕ್ ಪೋಸ್ಟ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೈಟ್ ಕರ್ಫ್ಯೂ ವೇಳೆಯಲ್ಲಿ ಅನಾವಶ್ಯಕವಾಗಿ ಯಾರು ಸಂಚಾರ ಮಾಡುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಓಡಾಟ ಮಾಡುವವರಿಗೆ ಗುರುತಿನ ಚೀಟಿ ಕಡ್ಡಾಯ.
ರೈಲ್ವೆ, ಏರ್ಪೋರ್ಟ್ ಗೆ ಹೋಗುವವರು ಟಿಕೆಟ್ ತೋರಿಸಿ ಸಂಚರಿಸಿ. ನಗರದಲ್ಲಿ ಒಟ್ಟು 36 ಚೆಕ್ ಪೊಸ್ಟ್ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ತುಂಬಾ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ಹೇರಲಾಗುವುದು ಎಂದು ಮಂಗಳೂರು ಪೋಲಿಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.