ಮಂಗಳೂರು, ನ. 8 : ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಹವಾನಿಯಂತ್ರಿತ ಸಾಲ ಮತ್ತು ವಸೂಲಾತಿ ವಿಭಾಗದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ
ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್ ಲೋಬೋರವರು ನೆರವೇರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಪ್ರೊಕ್ಯುರೇಟರ್ ಆಗಿರುವ ವಂದನೀಯ ಗುರುಗಳಾದ ವಿಜಯ್ ವಿಕ್ಟರ್ ಲೋಬೋರವರು ನವೀಕೃತ ಹವಾನಿಯಂತ್ರಿತ ಸಾಲ ಮತ್ತು ವಸೂಲಾತಿ ವಿಭಾಗದ ಆಶೀರ್ವಚನೆಯನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ, ವಂದನೀಯ ಗುರುಗಳಾದ ವಿಜಯ್ ವಿಕ್ಟರ್ ಲೋಬೋರವರು, ಅಧ್ಯಕ್ಷರಾದ ಅನಿಲ್ ಲೋಬೋರವರನ್ನು, ಉಪಾಧ್ಯಕ್ಷರನ್ನು, ನಿರ್ದೇಶಕರನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಸಾಲ ಮತ್ತು ವಸೂಲಾತಿ ವಿಭಾಗವು ಬ್ಯಾಂಕಿನ ಬೆನ್ನುಲುಬು. ಈ ವಿಭಾಗದಲ್ಲಿ
ಕಾರ್ಯನಿರ್ವಹಿಸುವವರು ಹೆಚ್ಚಿನ ಜವಾಬ್ದಾರಿಯೊಂದಿಗೆ ಸೇವಾನಿರತರಾಗಲು ಕರೆ ಕೊಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್.ಲೋಬೋರವರು, ಬ್ಯಾಂಕಿನ ಸೇವೆಯನ್ನು ಕೊಂಡಾಡಿದರು. ಬ್ಯಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಕಾಣಲಿ ಎಂದು ಆಶಿಸಿದರು. ಗಮನಿಸಬೇಕಾದ ಅಂಶವೇನೆಂದರೆ ಎಂದರೆ ಎಂದರೆ ಸುಮಾರು ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡದಲ್ಲಿ ಬ್ಯಾಂಕಿನ ಪೀಠೋಪಕರಣಗಳು ಹಾನಿಯಾಗಿದ್ದು, ಗ್ರಾಹಕರ ಸೇವೆಗ ವುದೇ ಧಕ್ಕೆಯಾಗದಂತೆ, ಸಾಲ ಮತ್ತು ವಸೂಲಾತಿ ವಿಭಾಗವು ಬ್ಯಾಂಕಿನ ಅಡಳಿತ ಕಛೇರಿಯಿಂದ ವ್ಯವಹರಿಸುತ್ತಿತ್ತು. ಬ್ಯಾಂಕಿನ ಪ್ರಗತಿಗೆ ಪೂರಕವಾದ ಸಾಲ ಮತ್ತು ವಸೂಲಾತಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ನವೀಕೃತ ಹವಾನಿಯಂತ್ರಿತ ಸಾಲ ಮತ್ತು ವಸೂಲಾತಿ ವಿಭಾಗವನ್ನು ನೆಲಮಹಡಿಗೆ ಸ್ಥಳಾಂತರಿಸಲಾಗಿದೆ.
ನವೀಕೃತ ಶಾಖೆಯ ಕನ್ಸಲ್ಟಿಂಗ್ ಇಂಜಿನಿಯರ್ ಕಾರ್ತಿಕ್ ಕಿರಣ್ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿರ್ದೇಶಕರಾದ ಡೇವಿಡ್ ಡಿಸೋಜ, ಐರಿನ್ ರೆಬೆಲ್ಲೊ, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಮಾರ್ಸೆಲ್ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ. ಜಿ. ಪಿಂಟೊ, ಮೈಕಲ್ ಡಿಸೋಜ, ಮಹಾ ಪ್ರಬಂಧಕರಾದ ಸುನಿಲ್ ಐ. ಮಿನೆಜಸ್, ಉಪಮಹಾ ಪ್ರಬಂಧಕರಾದ ರಾಜ್ ಎಫ್. ಮಿನೆಜಸ್ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಲ ಹಾಗೂ ವಸೂಲಾತಿ ವಿಭಾಗದ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊರವರು ಧನ್ಯವಾದ ಸಮರ್ಪಿಸಿದರು. ಬ್ಯಾಂಕಿನ ಸಿಬ್ಬಂದಿ ಶೈನಿಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.