ಬೆಂಗಳೂರು : ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾದ ಹಿನ್ನೆಲೆ ಈಗಾಗಲೇ ಖಾಕಿ ಪಡೆ ಫೀಲ್ಡ್ ಗೆ ಇಳಿದಿದ್ದಾರೆ ಮೈಕ್ ಗಳ ಮೂಲಕ ನೈಟ್ ಕರ್ಪ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಜನಸಂದಣಿ ಏರಿಯಾಗಳಾದ ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ರೈಲ್ವೇ ನಿಲ್ದಾಣಗಳು, ಸೇರಿದಂತೆ ಹೆಚ್ಚು ಜನರಿರುವ ಜಾಗಗಳಲ್ಲಿ ಹೊಯ್ಸಳ ವಾಹನಗಳ ಮೂಲಕ ನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹತ್ತು ಗಂಟೆಯ ಒಳಗೆ ಎಲ್ಲರು ಮನೆ ಸೇರಿಕೊಳ್ಳಬೇಕು, ಅನಾವಶ್ಯಕ ವಾಗಿ ತಿರುಗಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ಬಗ್ಗೆ ಅನೌನ್ಸ್ಮೆಂಟ್ ಮಾಡುತ್ತಿರುವ ಪೋಲಿಸರು.