ಬೆಳ್ತಂಗಡಿ : ಶಿವರಾತ್ರಿ ಕಳೆದು ನಾಲ್ಕು ದಿನಗಳ ಬಳಿಕ ಕಳೆದ 13 ವರ್ಷಗಳಿಂದ ಧರ್ಮಸ್ಥಳ ಪಾದಯಾತ್ರೆ ಕೈಗೊಳ್ಳುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ನ ತಂಡ ಬುಧವಾರ ರಾತ್ರಿ ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುವರಾಮ ದೇವಸ್ಥಾನಕ್ಕೆ ತಲುಪಿದೆ.
ತಂಡವು ಇಲ್ಲಿಂದ ಇಂದು(ಮಾ.10) ಧರ್ಮಸ್ಥಳಕ್ಕೆ ಪಾದಯಾತ್ರೆ ಮುಂದುವರಿಸಿ ದೇವರ ದರ್ಶನ ಪಡೆಯಲಿದೆ. ಈ ಬಾರಿ ಪಾದಯಾತ್ರೆಯ ತಂಡದಲ್ಲಿ ಒಟ್ಟು 300ರಷ್ಟು ಸದಸ್ಯರಿದ್ದು,ಇದರಲ್ಲಿ ಎಂಟು ಮಹಿಳೆಯರು ಇದ್ದಾರೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ. ಸೋಮವಾರ ಜಾವಗಲ್ ನಿಂದ ಹೊರಟ ತಂಡ ದಿನವೊಂದಕ್ಕೆ ಸುಮಾರು 45 ರಿಂದ 50 ಕಿಮೀ ಪಾದಯಾತ್ರೆ ಕೈಗೊಂಡಿದೆ.