ಬೆಳ್ತಂಗಡಿ: ಗಡಿನಾಡು ಕಾಸರಗೋಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಿರ್ಮಿಸಲಾಗುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡಿದ ಹತ್ತು ಲಕ್ಷ ರೂ. ಮೊತ್ತದ ಡಿ.ಡಿ. ಯನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಡಿ. ಹಷೇಂದ್ರ ಕುಮಾರ್ ಪ್ರತಿಷ್ಠಾನದ ಸಮಿತಿಯವರಿಗೆ ನೀಡಿ ಶುಭ ಹಾರೈಸಿದರು.
ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಲಕ್ಷ್ಮೀನಾರಾಯಣ ತಂತ್ರಿ (ಕೋಶಾಧಿಕಾರಿ), ರಾಧಾಕೃಷ್ಣ ಕಲ್ಚಾರ್ (ಅರ್ಥಧಾರಿಗಳು), ವಿಟ್ಲ ಮತ್ತು ಜಗದೀಶ ಕೆ. ಕೂಡ್ಲು ಡಿ.ಡಿ. ಪಡೆದು ಕೃತಜ್ಞತೆ ವ್ಯಕ್ತಪಡಿಸಿದರು.