ಬೆಳ್ತಂಗಡಿ: ಜೈನ ಧರ್ಮದ ವಿರುದ್ದ ಅಪಮಾನಿಕಾರಿಯಾಗಿ ಮಾತನಾಡಿದ ಅಯೂಬ್ ಖಾನ್ ಹಾಗೂ ಮಂಜು ಬದ್ರ ದಿನ್ನಿ ಪುಟ್ಟರಾಜು ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ.
ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರ ಆಡಳಿತ ಮಂಡಳಿ ಶಿಶಿಲ ಇದರ ಆಡಳಿತ ಮಂಡಳಿಯ ವತಿಯಿಂದ ಧರ್ಮಸ್ಥಳ ಠಾಣೆಗೆ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ಚಿತ್ತರಂಜನ್ ಜೈನ್, ಧನಕೀರ್ತಿ ಶೆಟ್ಟಿ, ಯುವರಾಜ ಪೂವಣಿ, ವೀರೇಂದ್ರ ಜೈನ್, ಫಣಿರಾಜ್ ಜೈನ್, ಸಂತೋಷ ಜೈನ್, ಸುದೀo ದ್ರ ಜೈನ್,ಚಿರನ್ ಜೈನ್, ಶೇಖರ್ ಜೈನ್, ಪ್ರಣೀತ್ ಜೈನ್ ಮುಂತಾದವರು ಉಪಸ್ಥಿತರಿದ್ದರು.