ಕಾಸರಗೋಡು : ಜಿಲ್ಲೆಗೆ ಗಾಂಜಾ ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಾಯಮ್ಮರ ಮೂಲೆ ಆಲಂಪಾಡಿ ರಸ್ತೆಯ ಮುಹಮ್ಮದ್ ಕಬೀರ್ (38) ಬಂಧಿತ ಆರೋಪಿ. ದಿನಗಳ ಹಿಂದೆ 45 ಕಿಲೋ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವಶಪಡಿಸಿ ಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಪೊಲೀಸರು ಕಬೀರ್ ನನ್ನು ಆಂಧ್ರಪ್ರದೇಶದಿಂದ ಬಂಧಿಸಿದ್ದಾರೆ.
ಈತ ಆಂಧ್ರಪ್ರದೇಶದಲ್ಲಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.