News Karnataka Kannada
Sunday, May 05 2024
ಮಂಗಳೂರು

ಜಿಲ್ಲೆಯಲ್ಲಿ ಉಗ್ರವಾದದ ಘಟನೆಗಳು ಖಂಡನೀಯ

Img 20210806 Wa0059
Photo Credit :
ಮಂಗಳೂರು : ನಮ್ಮ ಜಿಲ್ಲೆಯಲ್ಲಿ ಉಗ್ರವಾದದ ಕೆಲವು ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ, ಸ್ಥಳೀಯವಾಗಿ ಬೆಂಬಲವಿಲ್ಲದೆ ಇಂತಹಾ ಘಟನೆಗಳು ನಡೆಯಲು ಸಾದ್ಯವಿಲ್ಲ ಉಳ್ಳಾಲದಲ್ಲಿ ನಡೆದ ಘಟನೆಯನ್ನು ದ.ಕ.ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು.
ಅವರು ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ನಿನ್ನೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಮಗನ ಮನೆಯ ಮೇಲೆ ಈ ಕುಟುಂಬಕ್ಕೆ ಉಗ್ರ ಸಂಘಟನೆ ಜೊತೆ ನಂಟು ಇರುವುದನ್ನು ರಾಷ್ಟ್ರೀಯ ತನಿಖಾದಳ ಬಹಿರಂಗಪಡಿಸಿದೆ. ನಮ್ಮ ಜಿಲ್ಲೆ ಮತ್ತು ಕೇರಳದ ಕೆಲವು ಜಿಲ್ಲೆಗಳ ಮುಸ್ಲಿಂ ಯುವಕರನ್ನು ಭಯೋತ್ಪಾಧನಾ ಸಂಘಟನೆಗಳು ಸೆಳೆಯುತ್ತಿದೆ. ಎನ್ನವುದು ಆತಂಕಕಾರಿ ಸಂಗತಿ ಮತ್ತು ಈ ಬಗ್ಗೆ ತನಿಖೆಯಾಗಬೇಕು ಮತ್ತು ಉಗ್ರವಾದ ಸಂಘಟನೆಯನ್ನು ಬುಡ ಸಮೇತ  ಕಿತ್ತು ಹಾಕಬೇಕು ಎಂದು ಹೇಳಿದರು.
ಈ ಸಂದರ್ಭ ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ವಕ್ತಾರರಾದ ರಾಧಾಕೃಷ್ಣರವರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು