ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕನ್ನಡದ ಪ್ರಸಿದ್ಧ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಮತ್ತೇ ಪ್ರಾರಂಭವಾಗಲಿದೆ. ಎಸ್ಪಿಬಿ ಅವರ ನೆನಪಿನೊಂದಿಗೆ ಸಂಗೀತದ ಹೊಳೆ ಹರಿಯಲಿದೆ.
ಆಗಸ್ಟ್ 14ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಇದೀಗ ಹಲವು ವರ್ಷಗಳ ಬಳಿಕ ಎಸ್ಪಿಬಿ ಅವರ ಕಲ್ಪನೆಯಂತೆ ಹೊಸ ರೂಪದಲ್ಲಿ ಮತ್ತೇ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂಲಕ ಹೊಸ ಪ್ರತಿಭೆಗಳು ಸಂಗೀತ ಲೋಕಕ್ಕೆ ಪರಿಚಯಗೊಳ್ಳಲಿದ್ದು, ಗಾಯಕ ರಾಜೇಶ್ ಕೃಷ್ಣನ್, ರಘುದೀಕ್ಷಿತ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಕಾರ್ಯಕ್ರಮದ ಜಡ್ಜ್ಗಳಿದ್ದಾರೆ.
ಇನ್ನೂ ಮುಂದೆ ಸಂಗೀತ ಪ್ರಿಯರಿಗೆ ಈ ಕಾರ್ಯಕ್ರಮ ಮನರಂಜನೆ ನೀಡಲಿದೆ.