ಸುರತ್ಕಲ್ : ಜಿಲ್ಲಾ ಪರಿಷತ್ ಮಾಜಿ ಸದಸ್ಯ, ಕಾರ್ಮಿಕ ಮುಖಂಡ ಸಮಾಜ ಸೇವಕ ಃಉಡ್ಡು ಹೋರಟಗಾರನೆಂದು ಪ್ರಸಿದ್ದಿ ಪಡೆದಿದ್ದ ಪಟೇಲ್ ಶ್ರೀನಿವಾಸ ರಾವ್ ನ.೧೪ ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ನವಮಂಗಳೂರು ಬಂದರು ನಿರ್ಮಾಣದ ಸಂಧರ್ಭದಲ್ಲಿ ನಿರ್ವಸಿತರಾಗಿ ಕಾಟಿಪಳ್ಯ ಕೃಷ್ಣಾಪುರಕ್ಕೆ ಸಾವಿರಾರು ಕುಟುಂಭಗಳು ಸ್ಥಾನ ಪಲ್ಲಟವಾದಾಗ ಅವರಿಗೆ ನ್ಯಾಯಯುತ ಹಕ್ಕು ದೊರಕಿಸಿಕೊಡಲು ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಸಹಿತ ಆಡಳಿತ ನಾಯಕರ ಗಮನ ಸೆಳೆದು ಹಗಲಿರುಳು ಶ್ರಮಿಸಿದವರು. ಮಾತ್ರವಲ್ಲದೆ, ನಿರ್ವಸಿತರಿಗೆ ಮನೆ ಕಟ್ಟಲು, ಬೃಹತ್ ಕಂಪನಿಗಳು ಆರಂಭವಾದಾಗ ಸ್ಥಳೀಯರಿಗೆ ಉದ್ಯೋಗ ದೊರಕಿಸಲು ಹಾಗೂ ನಿರ್ವಸಿತರ ಪ್ರದೇಶವಾದ ಕೈಕಂಬದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನವನ್ನು ಭಕ್ತರ ನೆರವಿನಿಂದ ಸ್ಥಾಪಿಸಿ ಪೂಜೆ ಪುರಸ್ಕಾರ, ಶಾಲೆ, ಅನ್ನದಾನ ಹೀಗೆ ಜನರ ಸೇವೆ ಮಾಡುತ್ತಾ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.