ಬೆಳ್ತಂಗಡಿ: ಜನವರಿ 8, 9 ರಂದು ಉಜಿರೆಯಲ್ಲಿ ನಡೆಯುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್’ನ ಮೂರನೇ ರಾಜ್ಯ ಅಧಿವೇಶನದಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟಕ್ಕಾಗಿಯೇ ಒಂದು ಮಳಿಗೆಯನ್ನು ಮೀಸಲಿಡಬೇಕೆಂದು ನಿರ್ಧಾರವಾಗಿದೆ.
ಈ ಮಾರಾಟಮಳಿಗೆಯಲ್ಲಿ ತಮ್ಮ ಕೃತಿಗಳನ್ನು ಇಡಲು ಬಯಸುವವರು, ತಮ್ಮ ಪ್ರತಿಯೊಂದು ಕೃತಿಗಳ ಗರಿಷ್ಠ 25 ಪ್ರತಿಗಳನ್ನು ಮಳಿಗೆಯಲ್ಲಿ ಇಡಲು ನೀಡಬೇಕು. ಮಳಿಗೆಯಲ್ಲಿ ಇಡಲು ಬಯಸುವ ಕೃತಿಗಳ ಪರಿಚಯ ಇತ್ಯಾದಿ ವಿವರಗಳನ್ನು 9036178263 ಈ ಸಂಖ್ಯೆಗೆ ಡಿಸೆಂಬರ್ ೩೦ ರೊಳಗೆ ನೀಡಬೇಕು.
. ಜನವರಿ 8ರ (ಅಧಿವೇಶನದ ಉದ್ಘಾಟನೆ ದಿನ) ಬೆಳಿಗ್ಗೆ 9 ಗಂಟೆಯೊಳಗೆ ಕೃತಿಗಳನ್ನು ವ್ಯವಸ್ಥಾಪಕರಿಗೆ ತಲುಪಿಸಬೇಕು.
. ಅಧಿವೇಶನದ ಎರಡನೇ ದಿನ, ಜನವರಿ 9 ರ ಸಂಜೆ ಹಿಂದಿರುಗುವ ಮೊದಲು ವ್ಯವಸ್ಥಾಪಕರಿಂದ ಮಿಕ್ಕುಳಿದ ಪ್ರತಿಗಳನ್ನು ಹಾಗೂ, ಹಣ ಪಡೆಯಬಹುದು.
ಕಾರ್ಯಕರ್ತರು ತಮ್ಮ ಕೃತಿಗಳನ್ನು +91 90361 78263: ಅಖಿಲ ಭಾರತೀಯ ಸಾಹಿತ್ಯ ಪರಿಷದ್,ಕರ್ನಾಟಕ ತಲುಪಿಸಬೇಕೆಂದು ಕೊರಲಾಗಿದೆ.