ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಮುಂದಿನ ಜ. 8 ಮತ್ತು 9 ರಂದು ಉಜಿರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ತೃತೀಯ ಅಧಿವೇಶದ ಆರ್ಥಿಕ ಸಮಿತಿ ಯ ಕಾರ್ಯಚಟುವಟಿಕೆಗಳನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಾರಂಭಿಸಲಾಯಿತು.
ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ , ಅಧಿವೇಶನ ಸಮಿತಿ ಯ ಡಾ! ಎಂ. ಎನ್.ರವಿ ,ಅತ್ತಾಜೆ ಕೇಶವ ಭಟ್ , ಬೆಳ್ತಂಗಡಿ ತಾಲೂಕು ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು. ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳ ಪೂಜಾ ಕಾರ್ಯ ನೆರವೇರಿಸಿ ,ಪ್ರಸಾದ ನೀಡಿ ಶುಭ ಹಾರೈಸಿದರು.
ಅಧಿವೇಶನ ಸ್ಥಳ ಬದಲಾವಣೆ : ಸರಕಾರವು ಹೊರಡಿಸಿದ ಕೋವಿಡ್ ಸಂಬಂಧಿತ ನಿಯಮಾವಳಿಗಳಿಗೆ ಪೂರಕವಾಗಿ ‘ಅಭಾಸಾಪ’ದ ರಾಜ್ಯ ಅಧಿವೇಶನದ ಸ್ಥಳವನ್ನು ಬದಲಾಯಿಸಲಾಗಿದೆ. ಅಧಿವೇಶನವು 2022 ಜನವರಿ 8 ಮತ್ತು 9ರಂದು ಉಜಿರೆಯ ಜನಾರ್ದನ ದೇವಸ್ಥಾನದ ಬಳಿಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ. ದೇವಳಕೇಂದ್ರಿತವಾಗಿ ಉಳಿದ ವ್ಯವಸ್ಥೆಗಳ ಯೋಜನೆಗೆ ಚಿಂತನೆ ನಡೆದಿದೆ. ಸರಕಾರವು ಸೂಚಿಸಿದ ನಿಯಮಗಳನ್ನು ಪಾಲಿಸುವುದರೊಂದಿಗೆ ಇನ್ನಾವುದೇ ಬದಲಾವಣೆ ಇಲ್ಲದೆ ಅಧಿವೇಶನವು ನಿರ್ಧ ರಿತ ಯೋಜನೆಯಂತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ವಾಗತ ಸಮಿತಿ ಉದ್ಘಾಟನೆ : ಅ .ಭಾ .ಸಾ .ಪ. ೩ ನೇ ರಾಜ್ಯ ಅಧಿವೇಶನ ದ ಸ್ವಾಗತ ಸಮಿತಿಯನ್ನು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಡಿ. 9 ಗುರುವಾರ ಸಂಜೆ 5.30 ಕ್ಕೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ .ಕ. ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಅ .ಭಾ .ಸಾ .ಪ .ರಾಜ್ಯ ಉಪಾಧ್ಯಕ್ಷ ಎಸ.ಜಿ. ಕೋಟಿ ಉದ್ಘಾಟಿಸಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಪ್ರಸ್ತಾವಿಸಲಿದ್ದು ಉಜಿರೆ ಶ್ರೀ ಜನಾರ್ದನ ದೇವಸ್ತಾನದ ಶರತ್ ಕೃಷ್ಣ ಪಡುವೆಟ್ನಾಯ ಉಪಸ್ಥಿತರಿರುತ್ತಾರೆ. ಸಾಹಿತ್ಯಾಸಕ್ತರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.