ಬೆಳ್ತಂಗಡಿ: ಉಜಿರೆಯ ಸಾಂಸ್ಕೃತಿಕ ಸಂಘಟನೆ “ಯಕ್ಷಜನ ಸಭಾ ” ದ ದ್ವಿತೀಯ ವರ್ಷದ ತ್ರಿದಿನ “ಯಕ್ಷೋತ್ಸವ -2 ” ಕಾರ್ಯಕ್ರಮವು ಡಿಸೆಂಬರ್ 28, 29,ಮತ್ತು 30 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ, ಸಭಾ ಮಂಟಪದಲ್ಲಿ ನಡೆಯಲಿದೆ.
ಮೊದಲ ದಿನ ಡಿ. 28 ರಂದು ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಘೋಷಿತ ಯಕ್ಷಗಾನ ಮಂಡಳಿಯವರಿಂದ ಬಯಲಾಟ,,ನಂತರದ ಎರಡು ದಿನ ಜಿಲ್ಲೆಯ ಹೆಸರಾಂತ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದರಿಗೆ ಎರಡನೇ ವರ್ಷದ “ಯಕ್ಷಜನಸಭಾ ” ಪ್ರಶಸ್ತಿ ಪ್ರದಾನ ಮತ್ತು ಹಿರಿಯ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಮತ್ತು ಕಲಾವಿದ ಕೊಳ್ತಿಗೆ ನಾರಾಯಾಣ ಗೌಡ ಹಾಗೂ ಕ.ಸಾ .ಪ,ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಡಾ!ಎಂ. ಪಿ ಶ್ರೀನಾಥ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಯಕ್ಷಜನ ಸಭಾದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿದ್ದಾರೆ.
ಡಿ ೨೮ ರಂದು ಹನುಮ ಗಿರಿ ಮೇಳದ ಕಲಾವಿದರಿಂದ “ ಇಂದ್ರಕೀಲಕ– ಊರ್ವಶಿ ಶಾಪ –ಮಕರಾಕ್ಷ ಕಾಳಗ“ಪ್ರಸಂಗದ ಯಕ್ಷಗಾನ ಬಯಲಾಟ ಹಾಗು ,ಡಿ.29 ರಂದು“ ನಳ ದಮಯಂತಿ” ಹಾಗು ಡಿ.30 ರಂದು ” ರಾಜ ಸತ್ಯಹರಿಶ್ಚಂದ್ರ” ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. .ನೇರ ಪ್ರಸಾರದಲ್ಲಿ ಬಿತ್ತರಗೊಳ್ಳಲಿರುವ ಯಕ್ಷಜನ ಸಭಾದ ಯಕ್ಷೋತ್ಸವ-2 ಕಾರ್ಯಕ್ರಮಕ್ಕೆ ಯಕ್ಷಕಲಾಭಿಮಾನಿಗಳು ಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಕಾರ್ಯದರ್ಶಿ ವೆಂಕಟ್ರಮಣ ರಾವ್ ತಿಳಿಸಿದ್ದಾರೆ.