ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ದೇರಾಜೆ ಎಂಬಲ್ಲಿನ ಮುಹಮ್ಮದ್ ಅವರ ಮನೆಯಿಂದ ಹಾಡಹಗಲೇ 40 ಪವನ್ ಚಿನ್ನ ಕಳವು ಮಾಡಿರುವ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರ ತಂಡ ಬಂದಿಸಿಧ.
ಬಂಧಿತರಿಂದ ಕಳವುಗೈದ ಆಭರಣಗಳು, ನಗದು, ಹಾಗೂ ಆಲ್ಟೋ ಕಾರು, ಒಂದು ಪಲ್ಸರ್ ಬೈಕ್ ಸಹಿತ ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ಟ್ ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರನ್ನು ನಾವೂರು ಗ್ರಾಮದ ನಿರಿಂದಿ ಮನೆ ನಿವಾಸಿ ಮುಹಮ್ಮದ್ ಸ್ವಾಲಿ(26), ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ಯಹ್ಯಾ(32), ಮತ್ತು ನಾವೂರು ಗ್ರಾಮದ ಕಿರ್ನಡ್ಕ ಮನೆಯ ಬಿ.ಹೆಚ್ ನೌಫಲ್(27) ಎಂಬವರೆಂದು ಗುರುತಿಸಲಾಗಿದೆ.
ಇವರಿಂದ ಘಟನೆ ನಡೆದ ದಿನ ಮನೆಯಿಂದ ಕಳವುಗೈದಿದ್ದ 12 ಲಕ್ಷ ರೂ.ಮೌಲ್ಯದ 40 ಪವನ್ ಚಿನ್ನಾಭರಣ, 5200 ರೂ ನಗದು ಇವುಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.