ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಬಗೆಗೆ 1528 ರಿಂದಲೇ ನಿರಂತರ ಹೋರಾಟ ನಡೆದುಕೊಂಡು ಬಂದಿದೆ. ಅನೇಕ ರಾಜಕೀಯ ಸ್ಥಿತ್ಯಂತರಗಳಿಂದ ಹಿಂದೂಗಳ ಕ್ಷಾತ್ರತೇಜದ ಪ್ರತೀಕವಾಗಿ 1992 ಡಿ 6 ರ ಕಾರ್ಯಾಚರಣೆ ಯಿಂದ ಮಂದಿರದ ಕುರುಹುಗಳು ದೊರೆತವು. ಅಯೋಧ್ಯೆ ಜಮೀನು ವಿವಾದ ವಿಚಾರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು ನ್ಯಾಯಸಮ್ಮತವಾಗಿದ್ದು ಹಿಂದೂಗಳ ಹೋರಾಟಕ್ಕೆ ಸಂದ ಜಯವಾಗಿದೆ. ಸತತ ಸಂಘರ್ಷದ ನಂತರ ಹಿಂದೂಗಳ ಶತಮಾನದ ಕನಸು ನನಸಾಗುವ ಸುದಿನ ಸನ್ನಿಹಿತವಾಗುತ್ತಿದೆ. 2.77 ಎಕ್ರೆ ನಿವೇಶನದಲ್ಲಿ 2023 ರ ವೇಳೆಗೆ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಳ್ಳಲಿದೆ. ಆ ಮೂಲಕ ರಾಷ್ಟ್ರದಲ್ಲಿ ಹಿಂದೂ ಸಂಸ್ಕೃತಿ,ಸಭ್ಯತೆ ಸದಾಕಾಲ ನೆಲೆಸಲಿ ಎಂದು ಲೇಖಕ,ನಿವೃತ್ತ ಪ್ರಾಧ್ಯಾಪಕ ಡಾ| ಪಿ.ಅನಂತಕೃಷ್ಣ ಭಟ್ ನುಡಿದರು.
ಅವರು ಅ .14 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ವಿಶ್ವ ಹಿಂದೂ ಪರಿಷತ್ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಸ್ವಾನುಭವವನ್ನು ಎಳೆಎಳೆಯಾಗಿ ಸಾದರಪಡಿಸಿದರು. ಅವರು ಬರೆದ “ಅಯೋಧ್ಯೆ: ಪಾವನ ಶ್ರೀ ರಾಮ ಜನ್ಮಭೂಮಿ” ಅನುಭವ ಕಥಾನಕ ಕೃತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಕೃಷ್ಣ ಭಟ್ ಕೊಕ್ಕಡ ಬಿಡುಗಡೆಗೊಳಿಸಿ ಶ್ರೀ ರಾಮ ಜನ್ಮಭೂಮಿ ಹೋರಾಟ ವಿವಾದ 500 ವರ್ಷಗಳಿಂದ ಸಫಲವಾಗದಿದ್ದುದು ಈಗ ಹೇಗೆ ಸಫಲವಾಯಿತು ಎಂಬ ಕುರಿತು ಚಿಂತಿಸಬೇಕಾಗಿದೆ. ಹಿಂದೂಗಳು ಸಂಘಟಿತರಾಗಿ ಜಾಗೃತರಾಗಬೇಕಾಗಿದೆ. ಜನ್ಮಭೂಮಿ ಹೋರಾಟದ ನೆನಪಿನ ಕೃತಿ ಪ್ರತಿ ಮನೆಯಲ್ಲಿ ಮುಂದಿನ ಪೀಳಿಗೆಗೆ ಸಂಘಟನೆಗೆ ಶಕ್ತಿ ತುಂಬಲು ಪ್ರೇರಣೆಯಾಗಲಿದೆ ಎಂದರು. ಪುತ್ತೂರು ಜಿಲ್ಲಾ ವಿ,ಹಿ.ಪರಿಷತ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು ಉಪಸ್ಥಿತರಿದ್ದರು. ಮಂಜುನಾಥ ಶೆಟ್ಟಿ ನಿಡಿಗಲ್ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.
“ಅಯೋಧ್ಯೆ- ಪಾವನ ಶ್ರೀ ರಾಮ ಜನ್ಮ ಭೂಮಿ “ಕೃತಿ ಬಿಡುಗಡೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.