ಮಂಗಳೂರು :ಅತ್ತಾವರ ನಿವಾಸಿ ಅಲೆಕ್ಸಾಂಡರ್ ಉಪಯೋಗಿಸಿತ್ತಿದ್ದ ಕ್ರೆಡಿಟ್ ಕಾರ್ಡ್ಡನ್ನು ವಾರ್ಷಿಕ ಶುಲ್ಕ ಹೆಚ್ಚಾಗಿದ್ದರಿಂದ ಮಾರ್ಚ್ ೨೩ರಂದು ಸೆರಂಡರ್ ಮಾಡಿದ್ದರು. ಬಳಿಕ ಇದರ ಮಾಹಿತಿಯನ್ನು ಉಪಯೋಗಿಸಿಕೊಂಡು ಯಾರೋ ಅಪರಿಚಿತರು ಖಾತೆಯಿಂದ ಹಂತ ಹಂತವಾಗಿ ಸುಮಾರು ೧,೧೨,೦೦೦ ರೂ. ವರ್ಗಾಹಿಸುವುದು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನಿಂದ ತಿಳಿದು ಬಂದಿದೆ.
ಆರೋಪಿಗಳು ಕೆಡ್ರಿಟ್ ಕಾರ್ಡ್ ರಿನಿವಾಲ್ ಹೆಸರಲ್ಲಿ ವಂಚನೆ ನಡೆಸಿದ್ದು , ಅಲೆಕ್ಸಾಂಡರ್ ಕೆಡ್ರಿಟ್ ಕಾರ್ಡ್ ಅನ್ನು ಮಾರ್ಚ್ ೨೩ ಕ್ಕೆ ಬ್ಯಾಂಕ್ಗೆ ಹಿಂದುರುಗಿಸಿದ ಬಳಿಕ ಆರೋಪಿಗಳು ಕರೆ ಮಾಡಿ ಕೆಡ್ರಿಟ್ ಕಾರ್ಡ್ ರಿನಿವಾಲ್ ಬಗ್ಗೆ ಮಾಹಿತಿ ಪಡೆದಿದ್ರು. ನಂತರ ಅಲೆಕ್ಸಾಂಡರ್ ಖಾತೆಯಿಂದ ಮಾರ್ಚ್ ೨೭ ಕ್ಕೆ ಬೇರೆ ಬೇರೆ ಖಾತೆಗೆ ವರ್ಗಾವಣೆ.
ಸೆಪ್ಟೆಂಬರ್ ೯ ಕ್ಕೆ ಅಲೆಕ್ಸಾಂಡರ್ ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದರು. ತನಿಖೆಯಲ್ಲಿ ಉತ್ತರ ಕನ್ನಡ ಮುಂಡುಗೋಡು ಟಿಬೇಟಿಯನ್ ಕಾಲೋನಿ ನಿವಾಸಿಗಳಾದ ಲೊಬಸಂಗ್ ಸಂಗ್ಯೆ, ದಕಪ ಪುಂದೇ ಅವರನ್ನು ಬಂಧಿಸಲಾಗಿದ್ದು, ಈ ಕೃತ್ಯ ಮೂರು ಮಂದಿ ಆರೋಪಿಗಳಿಂದ ನಡೆದಿರುವ ಶಂಕಿಸಲಾಗಿದೆ ಎಂದು ಮಂಗಳೂರಿನ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.