ಬೆಳ್ತಂಗಡಿ : ಕೆಟ್ಟದ್ದನ್ನು ವರ್ಗೀಕರಿಸಿ ಉತ್ತಮ ಯೋಚನೆಗಳನ್ನು ಪಡೆಯಲು ಸ್ವಾಮೀಜಿಗಳ ಮಾರ್ಗದರ್ಶನದ ಅಗತ್ಯವಿದೆ. ಸಾಧು-ಸಂತರನ್ನು ಗೌರವದಿಂದ ಕಾಣುತ್ತಾ ನ್ಯಾಯನಿಷ್ಠೆಯಿಂದ ಬದುಕಿ, ಸ್ವಂತಕ್ಕೆ ಯಾವುದೇ ಲಾಭವಿಲ್ಲದೆ ಮಾಡುವ ಜನಸೇವೆ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ.ಇದು ಬದುಕಿನ ಉನ್ನತಿಗೆ ಮೂಲವಾಗುತ್ತದೆ.ಹೊಸ ಮೆರುಗು,ಕಲ್ಪನೆ ವಿಚಾರ, ಕೆಲಸ,ಕಾರ್ಯಗಳು ನಿರಾತಂಕವಾಗಿ ಸಾಗಲು ಇದು ಸಹಕಾರಿ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯದಲ್ಲಿ ಭಾಗವಹಿಸಿ, ಪಾದಪೂಜೆ ನೆರವೇರಿಸಿ ಮಾತನಾಡಿದರು.
ಇಂದು ಕನ್ಯಾಡಿ ಶ್ರೀರಾಮ ಮಹಾಸಂಸ್ಥಾನದ ಹೆಸರು ದೇಶದ ನಾನಾ ಮೂಲೆಗಳಲ್ಲಿ ಪಸರಿಸಿದೆ.ಇಲ್ಲಿ ಕೆಲವೊಂದು ಹೆಚ್ಚಿನ ಸೌಕರ್ಯಗಳ ಅಗತ್ಯವಿರುವ ಕುರಿತು ಶಾಸಕ ಹರೀಶ್ ಪೂಂಜ ಸರಕಾರದ ಗಮನ ಸೆಳೆದಿದ್ದಾರೆ. ಇಲ್ಲಿನ ಬೇಡಿಕೆಗಳಿಗೆ ಸಂಪೂರ್ಣ ಸ್ಪಂದನೆ ಇದೆ.ಭಕ್ತರ ಆಶಯದಂತೆ ಇಲ್ಲಿನ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.
ಜ್ಞಾನಯೋಗ ಎಂಬುದು ಕಬ್ಬಿಣದ ಕಡಲೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.ಇದಕ್ಕೆ ಕರ್ಮಯೋಗದ ಮೂಲಕ ಸಾಗಬೇಕು. ಪ್ರಾಮಾಣಿಕ ಸೇವೆ ಮೂಲಕ ಮಾಡುವ ಕರ್ಮಯೋಗಕ್ಕೆ ಇತರರು ಭುಜಬಲ ಕೊಟ್ಟರೆ ಲೋಕಕಲ್ಯಾಣ ಉಂಟಾಗುತ್ತದೆ. ಮಠಾಧಿಪತಿಗಳಿಗೆ ಲಾಲಸೆ ಇರಬಾರದು, ಸನ್ಯಾಸಿ ಇತರರಿಗೆ ಶಕ್ತಿ ತುಂಬಬೇಕು ಯಾವುದನ್ನು ಹೆಚ್ಚು ನಿರೀಕ್ಷಿಸಬಾರದು. ಚಿಂತನೆಯುಳ್ಳ ಉತ್ತಮ ವಿಚಾರದ ಪ್ರಾರ್ಥನೆಗೆ ಭಗವಂತನ ರಕ್ಷಣೆ ಇದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ನ ಉತ್ತರಕನ್ನಡ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ್, ಉದ್ಯಮಿ ದಯಾಚಂದ್ರ ಹೆಗ್ಡೆ, ಆರ್ ಜಿ ನಾಯಕ್, ಗಣಪತಿ ನಾಯಕ್ ಶಿರಸಿ, ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸ ಮಜಲು, ರಾಜಕುಮಾರ್, ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಶ್ರೀನಿವಾಸರಾವ್, ಪ್ರಶಾಂತ್ ಪಾರೆಂಕಿ, ಸೀತಾರಾಮ ಬೆಳಾಲು, ಶಶಿಧರ ಎಂ.ಕಲ್ಮಂಜ, ಕೃಷ್ಣಪ್ಪ ಗುಡಿಗಾರ ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನಯೋಗ ಎಂಬುದು ಕಬ್ಬಿಣದ ಕಡಲೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.ಇದಕ್ಕೆ ಕರ್ಮಯೋಗದ ಮೂಲಕ ಸಾಗಬೇಕು. ಪ್ರಾಮಾಣಿಕ ಸೇವೆ ಮೂಲಕ ಮಾಡುವ ಕರ್ಮಯೋಗಕ್ಕೆ ಇತರರು ಭುಜಬಲ ಕೊಟ್ಟರೆ ಲೋಕಕಲ್ಯಾಣ ಉಂಟಾಗುತ್ತದೆ. ಮಠಾಧಿಪತಿಗಳಿಗೆ ಲಾಲಸೆ ಇರಬಾರದು, ಸನ್ಯಾಸಿ ಇತರರಿಗೆ ಶಕ್ತಿ ತುಂಬಬೇಕು ಯಾವುದನ್ನು ಹೆಚ್ಚು ನಿರೀಕ್ಷಿಸಬಾರದು. ಚಿಂತನೆಯುಳ್ಳ ಉತ್ತಮ ವಿಚಾರದ ಪ್ರಾರ್ಥನೆಗೆ ಭಗವಂತನ ರಕ್ಷಣೆ ಇದೆ.