News Karnataka Kannada
Saturday, May 04 2024
ಮಂಗಳೂರು

ಉಕ್ರೇನ್‌ ನಲ್ಲಿ ಸಿಲುಕಿದ್ದ ಮಂಗಳೂರಿನ ಅನುಷಾ ಭಟ್ ತವರಿಗೆ ವಾಪಸ್

Anusha Bhat
Photo Credit :

ಮಂಗಳೂರು, ಮಾ.3 : ಯುದ್ಧಗ್ರಸ್ತ ಉಕ್ರೇನ್‌ನ ವಿನ್ನೆಸ್ಟಿಯಾ ನಗರದ ನ್ಯಾಶನಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ, ಮಂಗಳೂರು ಬಿಜೈ ನಿವಾಸಿ ಅನುಷಾ ಭಟ್ ಇಂದು ಮಂಗಳೂರಿಗೆ ಆಗಮಿಸಿದ್ದು, ಆಕೆಯನ್ನು ನೋಡುತ್ತಲೇ ಅಪ್ಪಿಕೊಂಡು ಆಕೆಯ ಪೋಷಕರು ಅಕ್ಷರಶಃ ಭಾವುಕರಾದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಂದಿಳಿದ ಅನುಷಾ ಭಟ್‌ರನ್ನು ಅರ ಹೆತ್ತವರು ಹಾಗೂ ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಜತೆಗೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು.

”ಉಕ್ರೇನ್‌ನಲ್ಲಿ ನಾವಿದ್ದ ಸ್ಥಳದಿಂದ ಗಡಿ ದಾಟಲು ಏಜೆಂಟ್‌ಗಳ ಮೂಲಕ ಪಾಸ್‌ಗಳನ್ನು ಪಡೆದುಕೊಂಡಿದ್ದೆವು. ಆದರೆ ಯಾವ ಗಡಿಯನ್ನು ನಾವು ತಲುಪಲಿದ್ದೇವೆ ಎಂಬ ಅರಿವು ನಮಗಿರಲಿಲ್ಲ. ಪಾಸ್‍ ಪಡೆದು ನಾವು ಅಲ್ಲಿಂದ ರೊಮೇನಿಯಾದ ಗಡಿ ತಲುಪಿದ್ದೆವು. ಅಲ್ಲಿ ನಾವು ಕೆಲಹೊತ್ತು ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಅಲ್ಲಿ ಸರಕಾರಿ ಅಧಿಕಾರಿಗಳಾರೂ ಇರಲಿಲ್ಲ. ಅಲ್ಲಿದ್ದಿದ್ದು ಕೇವಲ ಯುಕ್ರೇನ್‌ನ ಸೇನಾ ಅಧಿಕಾರಿಗಳು. ರೊಮೇನಿಯಾದ ಗಡಿಯಲ್ಲಿ ವಲಸೆ ಕಚೇರಿಯನ್ನು ತಲುಪಿದಾಗ ಅಲ್ಲಿಂದ ನಮ್ಮನ್ನು ಆಶ್ರಯ ತಾಣವೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಭಾರತ ಸರಕಾರ ನಮಗೆ ತಂಗಲು ವ್ಯವಸ್ಥೆ ಮಾಡಿದ್ದು, ಅಲ್ಲಿಂದ ನಮ್ಮನ್ನು ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಮುಂಬೈನಿಂದ ವಿಮಾನದ ವ್ಯವಸ್ಥೆ ಮಾಡಿಕೊಂಡು ಮಂಗಳೂರು ತಲುಪಿದ್ದೇನೆ.” ಎಂದು ಅನುಷಾ ಭಟ್ ಪ್ರತಿಕ್ರಿಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು