ಮಂಗಳೂರು : ನಗರ ಹೊರವಲಯದ ಕಟೀಲು ಎಕ್ಕಾರು ಬಡಕೆರೆ ಜಾರಂದಾಯ ದೇವಸ್ಥಾನ ವಠಾರದಲ್ಲಿ ನಡೆದ ಕಂಡೊಡೊಂಜಿ ದಿನ ಕಾರ್ಯಕ್ರಮದಲ್ಲಿ ತಾನೊಬ್ಬ ಐಪಿಎಸ್ ಶ್ರೇಣಿ ಅಧಿಕಾರಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎನ್ ಶಶಿಕುಮಾರ್ ಗದ್ದೆಗಿಳಿದು ಕೆಸರು ಮೆತ್ತಿಸಿಕೊಂಡು ಎಲ್ಲರ ಆಕರ್ಷಣೆಗೆ ಒಳಗಾದರು .
ರಜತೋತ್ಸವದ ಸಂಭ್ರಮದಲ್ಲಿರುವ ವಿಜಯ ಯುವ ಸಂಗಮ ಎಕ್ಕಾರು ಆಶ್ರಯದಲ್ಲಿ ಸರ್ಕಸ್ ತುಳು ಸಿನಿಮಾದ ಸಹಯೋಗದಲ್ಲಿ ವಿಶ್ವ ಮಣ್ಣಿನ ದಿನ ವಾದ ನಡೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮಕ್ಕೆ ಬಂದು ತನ್ನ ಮನೆಯ ಮಕ್ಕಳೊಂದಿಗೆ ಬೆಳಿಗ್ಗೆಯೇ ತಮ್ಮ ಟ್ರ್ಯಾಕ್ ಸೂಟ್ನಲ್ಲಿ ಗದ್ದೆಗಿಳಿದ ಶಶಿಕುಮಾರ್ ಕೆಸರಿನಲ್ಲಿ ಆಟವಾಡಿ ಮೈ ತುಂಬ ಕೆಸರು ಮಾಡಿಕೊಂಡು ಕೆಸರುಗದ್ದೆಯಲ್ಲಿ ಹೊರಳಾಡಿ ತುಳುನಾಡಿನ ಸಂಸ್ಕೃತಿಯಲ್ಲಿ ಮಣ್ಣಿನ ಮಗನಂತೆ ಸಂಭ್ರಮಿಸಿದರು ಅಲ್ಲಿದ್ದ ಮಕ್ಕಳನ್ನು ಕೆಸರಿನಲ್ಲಿ ಮುಳುಗಿಸಿ ಮಕ್ಕಳ ಮೈಮೇಲೆ ಕೆಸರೆರಚಿ ತಾವು ಮಕ್ಕಳಂತೆ ನಲಿದು ಸಂಭ್ರಮಿಸಿದರು