ಮಂಗಳೂರು : ಸಿನಿಮೀಯಾ ರೀತಿಯಲ್ಲಿ ಪೋಲಿಸ್ ಕಳ್ಳನನ್ನು ಅಟ್ಟಾಡಿಸಿ ಹಿಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಯು ನಗರದ ಹೃದಯಭಾಗದ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ ಸದ್ಯ ವೀಡಿಯೋ ವೈರಲ್ ಆಗಿದೆ .
ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದ ನೆಹರೂ ಮೈದಾನದಲ್ಲಿ ಉತ್ತರಪ್ರದೇಶ ಮೂಲದ ಗ್ರೈನೆಡ್ ಕೆಲಸಮಾಡುವ ವ್ಯಕ್ತಿಯೋರ್ವನ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದರು .ತಕ್ಷಣವೇ ಆತ ಹಾಗೂ ಸ್ಥಳೀಯರ ಎಚ್ಚೆತ್ತ ಬೊಬ್ಬೆ ಹಾಕಿ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಎಸೈ ವರುಣ್ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆತನನ್ನು ಬೆನ್ನಟ್ಟಿದ್ದಾರೆ. ಆತ ಹ್ಯಾಮಿಲ್ಟನ್ ಸರ್ಕಲ್ ಬಳಿ ತಲುಪುತ್ತಿದ್ದಂತೆ ಆತನನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ .
ಕಳ್ಳತನದಲ್ಲಿ 3ಮೂವರು ಭಾಗಿಯಾಗಿದ್ದಾರೆ ಮತ್ತೋರ್ವ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಅಧಿಕಾರಿಯ ವರುಣ್ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋನ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸಹ ಹಂಚಿಕೊಂಡಿದ್ದಾರೆ.